ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿಯ ಮೂವರು ಸದಸ್ಯರನ್ನು ಉಚ್ಚಾಟಿಸಿದ್ದ ಕಾಂಗ್ರೆಸ್, ಬುಧವಾರ ಶಿವಾಜಿನಗರ ಕ್ಷೇತ್ರದ ಇಬ್ಬರು ಸದಸ್ಯರನ್ನು ಉಚ್ಚಾಟಿಸಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಾಗೂ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದ ಆರೋಪದ ಮೇಲೆ ಪಾಲಿಕೆ ಸದಸ್ಯರಾದ ಜಯಮಹಲ್ ವಾರ್ಡ್ನ ಎಂ.ಕೆ.ಗುಣಶೇಖರ್, ರಾಮಸ್ವಾಮಿಪಾಳ್ಯ ವಾರ್ಡ್ನ ನೇತ್ರಾವತಿ ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹೇರೋಹಳ್ಳಿ ವಾರ್ಡ್ ರಾಜಣ್ಣ, ಹೆಮ್ಮಿಗೆಪುರ ವಾರ್ಡ್ ಆರ್ಯ ಶ್ರೀನಿವಾಸ್, ಬೊಮ್ಮನಹಳ್ಳಿಯ ಪಟೇಲ್ ರಾಜು ಅವರನ್ನು ಮಂಗಳವಾರ ಉಚ್ಚಾಟಿಸಲಾಗಿತ್ತು.