‘ವೈದ್ಯರ ಸಲಹೆಯಂತೆ ರೋಗ ನಿರೋಧಕ ಚುಚ್ಚುಮದ್ದು ಹಾಕಿಸಬೇಕು. ಆರೋಗ್ಯ ಸಹಾಯಕರು ಡಿ.12ರಂದು ಅದೇ ರೀತಿ ಎರಡು ಚುಚ್ಚುಮದ್ದು, ಒಂದು ಡ್ರಾಪ್ ಹಾಕಿದ್ದಾರೆ. ನಂತರ ಮಗುವಿನ ದೈಹಿಕ ಚಟುವಟಿಕೆ ಕ್ಷೀಣಿಸುತ್ತಾ ಬಂತು. ವೈದ್ಯರು ಬೆಂಗಳೂರಿನ ವಾಣಿವಿಲಾಸ ಮಕ್ಕಳ ಆಸ್ಪತ್ರೆಗೆ ದಾಖಲಿಸಲು ಶಿಫಾರಸು ಮಾಡಿದರು. ಡಿ.16ರಂದು ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿದಾಗ ಪರೀಕ್ಷೆ ನಡೆಸಿದ ವೈದ್ಯರು, ಔಷಧ ನೀಡಿರುವುದು ಕ್ರಮಬದ್ದವಾಗಿಲ್ಲ. ಮಗು ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ. ಮೊದಲು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆಯೋ ಅಲ್ಲೇ ತೆರಳುವಂತೆ ಸೂಚಿಸಿದರು’ ಎಂದು ಪವಿತ್ರಾ ಕಣ್ಣೀರಿಟ್ಟರು.