ಬೆಂಗಳೂರಿನ ಆರ್.ಟಿ.ನಗರ ಹಾಗೂ ಚಾಮುಂಡಿ ನಗರದ ನಿವಾಸಿಗಳಾದ ಶೇಖ್ ತಾಹೀರ್, ತೌಹೀದ್, ಶಾಹೀದ್, ಫೈಜಲ್ ಖಾನ್ ಎಂಬ ಯುವಕರು ವಾರಾಂತ್ಯದ ಮೋಜಿಗೆ ದೇವನಹಳ್ಳಿ ಸಮೀಪದ ನಂದಿ ಬೆಟ್ಟಕ್ಕೆ ಬಂದಿದ್ದರು. ಅಲ್ಲಿಂದ ರಾಮನಾಥಪುರದ ಕೆರೆಗೆ ಈಜಲು ಬಂದಿದ್ದರು ಎಂದು ಹೇಳಲಾಗಿದೆ. ಈ ನಾಲ್ವರೂ 18–20 ವರ್ಷ ಆಸುಪಾಸಿನವರು.