ಕೆರೆ ಅಂಗಳದಲ್ಲಿ ಒಳ ಚರಂಡಿ ಪೈಪ್ಲೈನ್ ಹಾಕಿರುವುದೇ ಅವೈಜ್ಞಾನಿಕವಾಗಿದೆ. ಜೊತೆಗೆ ಅಲ್ಲೇ ಒಳಚರಂಡಿ ಚೇಂಬರ್ ಸಹ ನಿರ್ಮಿಸಲಾಗಿದೆ. ಈ ಚೆಂಬರ್ಗಳು ಕೆರೆಯಲ್ಲಿ ನೀರು ನಿಲ್ಲುವ ಹಂತಕ್ಕಿಂತಲು ತಳಮಟ್ಟದಲ್ಲಿ ಇರುವುದರಿಂದ ಕೆರೆಯ ನೀರೆಲ್ಲವು ಒಳಚರಂಡಿ ಮೂಲಕ ಹರಿದು ಹೊರ ಹೋಗುತ್ತಿವೆ. ಇದಲ್ಲದೆ ಒಳರಂಡಿ ನೀರಿನ ಪೈಪ್ ಬಂದ್ ಆದಾಗ ಹೊರಬರುವ ಕೊಳಚೆ ನೀರು ಕೆರೆಗೆ ಸೇರುತ್ತಿವೆ ಎಂದು ಕೆರೆ ಅಂಚಿನ ನಿವಾಸಿಗಳಾದ ಜಿ.ಯಲ್ಲಪ್ಪ, ರಾಮಣ್ಣ, ಯುವ ಸಂಚಲನದ ಚಿದಾನಂದ್ ಹಾಗೂ ಗಿರೀಶ್ ಮಾಹಿತಿ ನೀಡಿದ್ದಾರೆ.