ಉದ್ಯಾನವನದಲ್ಲಿ ವ್ಯಾಯಾಮ ಮಾಡಲು ಅಳವಡಿಸಿರುವ ಪರಿಕರಗಳು ಮುರಿದು ಹೋಗಿ ವರ್ಷ ಕಳೆದಿದೆ. ಆದರೂ ಅದನ್ನು ದುರಸ್ತಿಗೊಳಿಸಿಲ್ಲ. ಉದ್ಯಾನ ಪಕ್ಕದಲ್ಲಿ ಪುರಸಭೆಯ ಜಾಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಶುದ್ಧಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದ್ದಾರೆ. ಕೊಳವೆಬಾವಿಯೂ ಇದೆ. ನೆಲಮಟ್ಟದ ನೀರಿನ ಸಂಪು ಇದೆ. ಆದರೆ, ಇಲ್ಲಿಂದ ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡುವವರು ಇಲ್ಲದೆ ಗಿಡಗಳು ಒಣಗಿವೆ.