ಖಾಸಗಿ ಕಂಪನಿಗಳು ಗುಣಮಟ್ಟದ ಮಾಸ್ಕ್ ನೀಡಿಲ್ಲ ಎಂಬುದು ಸ್ಥಳೀಯರ ಆರೋಪ. ವಿಮಾನ ನಿಲ್ದಾಣ ಅಕ್ಕ ಪಕ್ಕದಲ್ಲಿರುವ ಕನ್ನಮಂಗಲ, ಯರ್ತಿಗಾನಹಳ್ಳಿ, ಅಕ್ಲೇನಹಳ್ಳಿ, ಮಲ್ಲೇನಹಳ್ಳಿ, ಕಾಡಯರಪನಹಳ್ಳಿ, ಭಟ್ರಮಾರನಹಳ್ಳಿ, ಸಿಂಗನಾಯಕನಹಳ್ಳಿ,ಬಂಡಕೋಡಿಗೇನಹಳ್ಳಿ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಮಿಕರಿದ್ದಾರೆ.ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಈವರೆಗೆ ಸುಳಿದಿಲ್ಲ, ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ನೋಡಿ ಮನೆಯಲ್ಲೆ ಇರಬೇಕಾ, ಬೇರೆಡೆ ಎಲ್ಲಿಯಾದರು ಹೋಗಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದೇವೆ ಎನ್ನುತ್ತಾರೆ ಕನ್ನಮಂಗಲ ಗ್ರಾಮಸ್ಥರು.