ಸಮಿತಿ ಪ್ರಧಾನ ಕಾರ್ಯದರ್ಶಿ ಕೇಶವ ಮಾತನಾಡಿ, ಸ.ನಂ7ರಲ್ಲಿ ಸರ್ಕಾರಿ ಗೋಮಾಳ 11ಗುಂಟೆ, ಸ.ನಂ.3ರಲ್ಲಿ 1.18ಎಕರೆ, ಸ.ನಂ.1ರಲ್ಲಿ 7.15 ಎಕರೆ, ಸ.ನಂ59ರಲ್ಲಿ 19ಗುಂಟೆ ಜಾಗವಿದೆ. ಇದರ ಜತೆಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಸ.ನಂ.5,7,3ರಲ್ಲಿ ದಲಿತರಿಗೆ ನಿವೇಶನ ಹಕ್ಕುಪತ್ರ ನೀಡಿದೆ. ಆದರೆ, ಒತ್ತುವರಿ ಮಾಡಿಕೊಳ್ಳಲಾಗಿದೆ. ತೆರವುಗೊಳಿಸಲು ಆದೇಶ ನೀಡಿದ್ದರೂ ತಹಶೀಲ್ದಾರ್ ಒತ್ತುವರಿದಾರರ ಪರವಾಗಿ ನಿಂತಿದ್ದಾರೆ. ಸ.ನಂ.7ರಲ್ಲಿ ದಲಿತರಿಗೆ ನೀಡಿದ ಸಾಗುವಳಿ ಹಕ್ಕು ಪತ್ರದ ದಾಖಲೆ ಕಡತವನ್ನೇ ನಾಪತ್ತೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.