ದೊಡ್ಡಬಳ್ಳಾಪುರ:ಲಯನ್ಸ್ ಕ್ಲಬ್, ಲಯನ್ಸ್ ರಕ್ತನಿಧಿ, ಮಹಾವೀರ್ ಆಸ್ಪತ್ರೆಯಿಂದ ನ. 28ರಂದು ಬೆಳಿಗ್ಗೆ 10ಗಂಟೆಗೆ ಕನ್ನಡ ರಾಜ್ಯೋತ್ಸವ ಹಾಗೂ ಅಪ್ಪು ನೆನಪು ಮಾಸಿಕ ಪುಣ್ಯ ಸ್ಮರಣೆ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಲಯನ್ಸ್ ಭವನದಲ್ಲಿ ನಡೆಯಲಿದೆ.
ಲಯನ್ಸ್ ಜಿಲ್ಲಾ ಗರ್ವನರ್ ಎಂ.ಬಿ. ದೀಪಕ್ಸುಮನ್ಶಿಬಿರ ಉದ್ಘಾಟಿಸಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಜಿ. ಗೋಪಾಲ್ ಅಧ್ಯಕ್ಷತೆವಹಿಸಲಿದ್ದಾರೆ. ಶಿಬಿರಕ್ಕೆ ತಾಲ್ಲೂಕು ಅಪ್ಪು ಅಭಿಮಾನಿಗಳು, ಕನ್ನಡ ಚಿತ್ರರಂಗದ ಎಲ್ಲಾ ಚಿತ್ರನಟರ ಅಭಿಮಾನಿಗಳು ಸಹಯೋಗ ನೀಡಿದ್ದಾರೆ. ಸಂಜೆ 6 ಗಂಟೆಗೆ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.