<p>ಪ್ರಜಾವಾಣಿ ವಾರ್ತೆ</p>.<p><strong>ದೇವನಹಳ್ಳಿ</strong>: ಸಂವಿಧಾನ ಹೊರತಾಗಿ ದೇಶವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಇಂದು ಸಂವಿಧಾನ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಸಂವಿಧಾನ ರಕ್ಷಿಸುವ ಅಭ್ಯರ್ಥಿಗಳಿಗೆ ಮತ ನೀಡಿ ಪ್ರಜಾ ಪ್ರಭುತ್ವ ಉಳಿಸಿ ಎಂದು ಸಂವಿಧಾನ ರಕ್ಷಣಾ ವೇದಿಕೆಯ ಮುಖ್ಯಸ್ಥ ನಿರಂಜನ್ ಆರಾಧ್ಯ ತಿಳಿಸಿದರು.</p>.<p>ಕಾಲಕ್ಕೆ ತಕ್ಕಂತೆ ಸಂವಿಧಾನದಲ್ಲಿ ಬದಲಾವಣೆಯಾಗಿದೆ. ಇದು ಜನರ ಕ್ಷೇಮಾಭಿವೃದ್ಧಿಗಾಗಿ ಮಾಡಿದ ಸಾರ್ವಭೌಮ ರಾಜಕೀಯ ಪ್ರಕ್ರಿಯೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>ಸಾಕಷ್ಟು ರಾಜಕೀಯ ಶಕ್ತಿಗಳು ಸಂವಿಧಾನವನ್ನೇ ರದ್ದು ಮಾಡಿ, ಪ್ರಜಾಪ್ರಭುತ್ವ ಗಣರಾಜ್ಯವಾಗಿರುವ ಭಾರತದ ಅಸ್ತಿತ್ವವನ್ನೇ ಬದಲಾವಣೆ ಮಾಡಲು ಪಣತೊಟ್ಟಿವೆ. ಅದರ ವಿರುದ್ಧ ಪ್ರಜ್ಞಾವಂತ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.</p>.<p>ಶಿಕ್ಷಣ ಮೂಲಭೂತ ಹಕ್ಕಾಗಿ ಸಂವಿಧಾನಕ್ಕೆ ಸೇರ್ಪಡೆಯಾದರೂ, ಇಂದಿಗೂ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಆಳುವ ಸರ್ಕಾರ ಎಡವಿದೆ. ಪ್ರತಿ ನೂರು ಶಾಲೆಯಲ್ಲಿ ಕೇವಲ ಇಪ್ಪತ್ತೈದು ಶಾಲೆಗಳಿಗೆ ಸವಲತ್ತು ಲಭಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಸಂವಿಧಾನ ಉಳಿಯಬೇಕಿದ್ದರೇ ಶಿಕ್ಷಣದಿಂದ ಮಾತ್ರ ಸಾಧ್ಯ, ಆದರೆ, ಮಕ್ಕಳ ಪಠ್ಯದಲ್ಲಿ ಕೋಮು ಬಣ್ಣದ ಅಂಶಗಳು ರಾರಾಜಿಸುತ್ತಿದೆ. ಅವೈಜ್ಞಾನಿಕ ಶಿಕ್ಷಣದಿಂದ ಬಹುತ್ವದ ಗುಣ ಮರೆಯಾಗುತ್ತಿದೆ ಎಂದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿದಂತೆ ವಿಷಯಗಳನ್ನು ತಪ್ಪಾಗಿ ಅರ್ಥೈಸುವ ಪರಿಸ್ಥಿತಿ ಎದುರಾಗಿದ್ದು, ಅವುಗಳನ್ನು ಸರಿ ದಾರಿಗೆ ತಂದು, ಪ್ರಜೆಗಳ ಪ್ರಜ್ಞಾವಂತಿಗೆ ಹೆಚ್ಚಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಿ, ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ಎಂದರು.</p>.<p>ಇದೇ ವೇಳೆ ಉಮೇಶ್ ಗಂಗವಾಡಿ, ಮ್ಯಾಥಿವ್ ಮುನಿಯಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ದೇವನಹಳ್ಳಿ</strong>: ಸಂವಿಧಾನ ಹೊರತಾಗಿ ದೇಶವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಇಂದು ಸಂವಿಧಾನ ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪಿದೆ. ಸಂವಿಧಾನ ರಕ್ಷಿಸುವ ಅಭ್ಯರ್ಥಿಗಳಿಗೆ ಮತ ನೀಡಿ ಪ್ರಜಾ ಪ್ರಭುತ್ವ ಉಳಿಸಿ ಎಂದು ಸಂವಿಧಾನ ರಕ್ಷಣಾ ವೇದಿಕೆಯ ಮುಖ್ಯಸ್ಥ ನಿರಂಜನ್ ಆರಾಧ್ಯ ತಿಳಿಸಿದರು.</p>.<p>ಕಾಲಕ್ಕೆ ತಕ್ಕಂತೆ ಸಂವಿಧಾನದಲ್ಲಿ ಬದಲಾವಣೆಯಾಗಿದೆ. ಇದು ಜನರ ಕ್ಷೇಮಾಭಿವೃದ್ಧಿಗಾಗಿ ಮಾಡಿದ ಸಾರ್ವಭೌಮ ರಾಜಕೀಯ ಪ್ರಕ್ರಿಯೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.</p>.<p>ಸಾಕಷ್ಟು ರಾಜಕೀಯ ಶಕ್ತಿಗಳು ಸಂವಿಧಾನವನ್ನೇ ರದ್ದು ಮಾಡಿ, ಪ್ರಜಾಪ್ರಭುತ್ವ ಗಣರಾಜ್ಯವಾಗಿರುವ ಭಾರತದ ಅಸ್ತಿತ್ವವನ್ನೇ ಬದಲಾವಣೆ ಮಾಡಲು ಪಣತೊಟ್ಟಿವೆ. ಅದರ ವಿರುದ್ಧ ಪ್ರಜ್ಞಾವಂತ ಮತದಾರರು ಎಚ್ಚರಿಕೆಯಿಂದ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.</p>.<p>ಶಿಕ್ಷಣ ಮೂಲಭೂತ ಹಕ್ಕಾಗಿ ಸಂವಿಧಾನಕ್ಕೆ ಸೇರ್ಪಡೆಯಾದರೂ, ಇಂದಿಗೂ ಎಲ್ಲ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಆಳುವ ಸರ್ಕಾರ ಎಡವಿದೆ. ಪ್ರತಿ ನೂರು ಶಾಲೆಯಲ್ಲಿ ಕೇವಲ ಇಪ್ಪತ್ತೈದು ಶಾಲೆಗಳಿಗೆ ಸವಲತ್ತು ಲಭಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಸಂವಿಧಾನ ಉಳಿಯಬೇಕಿದ್ದರೇ ಶಿಕ್ಷಣದಿಂದ ಮಾತ್ರ ಸಾಧ್ಯ, ಆದರೆ, ಮಕ್ಕಳ ಪಠ್ಯದಲ್ಲಿ ಕೋಮು ಬಣ್ಣದ ಅಂಶಗಳು ರಾರಾಜಿಸುತ್ತಿದೆ. ಅವೈಜ್ಞಾನಿಕ ಶಿಕ್ಷಣದಿಂದ ಬಹುತ್ವದ ಗುಣ ಮರೆಯಾಗುತ್ತಿದೆ ಎಂದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿದಂತೆ ವಿಷಯಗಳನ್ನು ತಪ್ಪಾಗಿ ಅರ್ಥೈಸುವ ಪರಿಸ್ಥಿತಿ ಎದುರಾಗಿದ್ದು, ಅವುಗಳನ್ನು ಸರಿ ದಾರಿಗೆ ತಂದು, ಪ್ರಜೆಗಳ ಪ್ರಜ್ಞಾವಂತಿಗೆ ಹೆಚ್ಚಿಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಿ, ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿ ಎಂದರು.</p>.<p>ಇದೇ ವೇಳೆ ಉಮೇಶ್ ಗಂಗವಾಡಿ, ಮ್ಯಾಥಿವ್ ಮುನಿಯಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>