ಕೈಲಾಸದಿಂದ ಗೌರಿ ದೇವಿ ತವರುಮನೆಗೆ ಬಂದಿರುವಳೆಂಬ ಭಾವನೆಯಿಂದ ಪ್ರತಿದಿನ ದೇವಿಗೆ ವಿಶೇಷ ಸಿಹಿ ತಿನಿಸುಗಳನ್ನು ಮಾಡಿ ಅರ್ಪಿಸುತ್ತಾರೆ. ತಂಬಿಟ್ಟು ಬೆಲ್ಲದಾರತಿ, ಮಿಠಾಯಿ, ಎಳ್ಳುಂಡೆ ತಿನಿಸುಗಳನ್ನು ಸಮರ್ಪಿಸಿ ಮಡಿಲಕ್ಕಿ ಕಟ್ಟಿ ವಿಶೇಷ ಪೂಜೆ ನೆರವೇರಿಸಿ ದೇವಿಯನ್ನು ಜಲಾಧಿವಾಸಕ್ಕೆ ಕಳುಹಿಸಿಕೊಡಲಾಗುತ್ತದೆ.