ಬೆಂಗಳೂರಿನ ಕಸ ಹೊರಗೆ ಕಳುಹಿಸಲು ಇರುವ ಕಾಳಜಿ, ಕಸ ವಿಲೇವಾರಿ ಬಗ್ಗೆ ಇಲ್ಲ. ಮೃತನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡದ ಹೊರತು ಪ್ರತಿಭಟನೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಮೃತನ ಕುಟುಂಬಕ್ಕೆ ಸ್ಥಳದಲ್ಲೇ ₹5 ಲಕ್ಷ ಚೆಕ್ ನೀಡಲಾಯಿತು. ವಾರದ ಒಳಗಾಗಿ ₹20 ಲಕ್ಷ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.