<p>ವಿಜಯಪುರ: ಬೈಪಾಸ್ ರಸ್ತೆಯಿಂದ ಚಿಕ್ಕತತ್ತಮಂಗಲ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳು ಡಾಂಬರೀಕರಣವಾಗದೆ ದುಸ್ಥಿತಿಯಲ್ಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.<br /> <br /> ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗಿದೆ. ಕೊರಕಲು ಗುಂಡಿಗಳಾಗಿರುವ ಪರಿಣಾಮ ದ್ವಿಚಕ್ರವಾಹನ ಸವಾರರು ಮುಗ್ಗರಿಸುವ ಅವಕಾಶಗಳೇ ಹೆಚ್ಚು. ಗ್ರಾಮದಿಂದ ನೂರಾರು ಮಂದಿ ದ್ರಾಕ್ಷಿ ಕಟಾವಿಗೆ ವಿವಿಧ ಊರುಗಳಿಗೆ ತೆರಳುತ್ತಾರೆ ಸುತ್ತ ಮುತ್ತಲು ಅರಣ್ಯ ಪ್ರದೇಶವಿರುವುದರಿಂದ ಈ ರಸ್ತೆಯಲ್ಲಿ ನಡೆದು ಸಾಗುವುದು ಸಹ ಅಪಾಯಕಾರಿ ಕನಿಷ್ಠ ಪಕ್ಷ ಬೀದಿ ದೀಪಗಳನ್ನು ಅಳವಡಿಸಿದರೆ ನೆಮ್ಮದಿಯಿಂದ ನಡೆದು ಸಾಗಬಹುದು ಎನ್ನುತ್ತಾರೆ ಸಾರ್ವಜನಿಕರು.<br /> <br /> ವಿಜಯಪುರ, ದೇವನಹಳ್ಳಿ ಪಟ್ಟಣಗಳಿಂದ ಬೆಂಗಳೂರು ಮುಖ್ಯರಸ್ತೆ ಮೂಲಕ ತಿಮ್ಮನಹಳ್ಳಿ, ಚಿಕ್ಕತತ್ತಮಂಗಲ, ದೊಡ್ಡತತ್ತಮಂಗಲ, ಯಲಿಯೂರು, ಹಳಿಯೂರು, ಮಂಡಿಬೆಲೆ, ಗಡ್ಡದನಾಯ್ಕನಹಳ್ಳಿ ಗ್ರಾಮಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: ಬೈಪಾಸ್ ರಸ್ತೆಯಿಂದ ಚಿಕ್ಕತತ್ತಮಂಗಲ ಗ್ರಾಮವನ್ನು ಸಂಪರ್ಕಿಸುವ ರಸ್ತೆಗಳು ಡಾಂಬರೀಕರಣವಾಗದೆ ದುಸ್ಥಿತಿಯಲ್ಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.<br /> <br /> ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗಿದೆ. ಕೊರಕಲು ಗುಂಡಿಗಳಾಗಿರುವ ಪರಿಣಾಮ ದ್ವಿಚಕ್ರವಾಹನ ಸವಾರರು ಮುಗ್ಗರಿಸುವ ಅವಕಾಶಗಳೇ ಹೆಚ್ಚು. ಗ್ರಾಮದಿಂದ ನೂರಾರು ಮಂದಿ ದ್ರಾಕ್ಷಿ ಕಟಾವಿಗೆ ವಿವಿಧ ಊರುಗಳಿಗೆ ತೆರಳುತ್ತಾರೆ ಸುತ್ತ ಮುತ್ತಲು ಅರಣ್ಯ ಪ್ರದೇಶವಿರುವುದರಿಂದ ಈ ರಸ್ತೆಯಲ್ಲಿ ನಡೆದು ಸಾಗುವುದು ಸಹ ಅಪಾಯಕಾರಿ ಕನಿಷ್ಠ ಪಕ್ಷ ಬೀದಿ ದೀಪಗಳನ್ನು ಅಳವಡಿಸಿದರೆ ನೆಮ್ಮದಿಯಿಂದ ನಡೆದು ಸಾಗಬಹುದು ಎನ್ನುತ್ತಾರೆ ಸಾರ್ವಜನಿಕರು.<br /> <br /> ವಿಜಯಪುರ, ದೇವನಹಳ್ಳಿ ಪಟ್ಟಣಗಳಿಂದ ಬೆಂಗಳೂರು ಮುಖ್ಯರಸ್ತೆ ಮೂಲಕ ತಿಮ್ಮನಹಳ್ಳಿ, ಚಿಕ್ಕತತ್ತಮಂಗಲ, ದೊಡ್ಡತತ್ತಮಂಗಲ, ಯಲಿಯೂರು, ಹಳಿಯೂರು, ಮಂಡಿಬೆಲೆ, ಗಡ್ಡದನಾಯ್ಕನಹಳ್ಳಿ ಗ್ರಾಮಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>