<p><strong>ದೇವನಹಳ್ಳಿ: </strong>ದೇವನಹಳ್ಳಿ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ಅಂಗವಿಕಲರ ಕುಂದು ಕೊರತೆ `ಸಭೆ ಶಿರಸ್ತೇದಾರ್ ರಾಘವೇಂದ್ರನ್ ಹಾಗೂ ಸಿಡಿಪಿಒ ಅಶ್ವಥಮ್ಮ ನೇತೃತ್ವದಲ್ಲಿ ನಡೆಯಿತು.<br /> <br /> ಸಭೆಯಲ್ಲಿ ಮಾತನಾಡಿದ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಸದಸ್ಯ ಕಾರ್ಯದರ್ಶಿ ಎಂ.ಮಂಜುನಾಥ್, ಅಂಗವಿಕಲರ ಸಮಸ್ಯೆಗೆ ಪ್ರತಿ ತಿಂಗಳು ಸಭೆ ನಡೆಸಿ ಕುಂದುಕೊರತೆ ಆಲಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಬೇಕು. ಇಲಾಖೆ ಅಧಿಕಾರಿಗಳು ಮೂರು ನಾಲ್ಕು ತಿಂಗಳಾದರೂ ಸಭೆ ನಡೆಸುತ್ತಿಲ್ಲ.</p>.<p>ಅಂಗವಿಕಲರ ಸಮಸ್ಯೆ ಆಲಿಸುವರೇ ಇಲ್ಲದಂತಾಗಿದೆ. ಅಂಗವಿಕಲರಿಗೆ ಮೀಸಲಿಟ್ಟ ಶೇ.3ರಷ್ಟು ಅನುದಾನ ಸದ್ಬಳಕೆಯಾಗುತ್ತಿಲ್ಲ. ಗ್ರಾ.ಪಂ. ಸೇರಿ ದಂತೆ ಎಲ್ಲಾ ಇಲಾಖೆಗಳು ನಿರ್ಲಕ್ಷ್ಯ ತೋರಿವೆ. ಅಯ್ಯೋಪಾಪ ಎಂದರೆ ನಮ್ಮ ಸಮಸ್ಯೆಗಳು ಈಡೇರುತ್ತವೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಕಳೆದ ಒಂದುವರೆ ವರ್ಷದಿಂದ ಅಂಗವಿಕಲರಿಗೆ ತಾಲ್ಲೂಕು ಕೇಂದ್ರದಲ್ಲಿ ಸಮುದಾಯಭವನಕ್ಕಾಗಿ ನಿವೇಶನ ಗುರುತಿಸುವಂತೆ ಮನವಿ ಮಾಡಿ, ಜಿಲ್ಲಾಧಿಕಾರಿಗಳಿಗೆ ಕಡತ ರವಾನಿಸಲಾಗಿದೆ. ಜಿಲ್ಲಾಧಿಕಾರಿಯವರು ಸ್ಥಳ ಗುರುತಿಸಿ ನಿವೇಶನದ ಸಾಧಕ ಬಾಧಕದ ಬಗ್ಗೆ ಪರಿಶೀಲಿಸಿ ವರದಿ ನೀಡಿ ಎಂದು ಆದೇಶ ನೀಡಿದ್ದರು.</p>.<p>ಕಂದಾಯ ಇಲಾಖೆ ಅಧಿಕಾರಿಗಳು ಕಡತವನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಕಚೇರಿಗಳಿಗೆ ಅಲೆದು ಸಾಕಾಗಿದೆ. ಮಿನಿ ವಿಧಾನಸೌಧ ಮೂರು ಅಂತಸ್ಥಿನ ಕಟ್ಟಡವಾಗಿರು ವುದರಿಂದ ಅಂಗವಿ ಕಲರು ವಿವಿಧ ಕೊಠಡಿಗಳಿಗೆ ತೆರಳಲು ಆಸಕ್ತರಾಗಿದ್ದರೆ ಎಂದರು.<br /> <br /> ತಾಲ್ಲೂಕು ಅಂಗವಿಕಲರ ಸಂಘ ಅಧ್ಯಕ್ಷ ಸುರೇಶ್ ಅಯ್ಯರ್ ಮಾತನಾಡಿ, ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿಗೆ ₹ 1300, ಶೇ.40 ರಿಂದ 75 ರಷ್ಟು ಹೊಂದಿರುವವರಿಗೆ ₹ 500 ಸಾಮಾಜಿಕ ಭದ್ರತೆಯಡಿ ಮಾಶಾಸನ ನೀಡಲಾಗುತ್ತಿದೆ.<br /> <br /> ಇದು ಸಮರ್ಪಕವಾಗಿ ಸಕಾಲದಲ್ಲಿ ಆಗುತ್ತಿಲ್ಲ. ಅಂಗವಿಕಲ ವೇತನ ಪಡೆಯಲು ಅಂಗವಿಕಲರ ದೃಢೀಕರಣ ಪತ್ರದ ನಕಲು ನೀಡಿದರೆ ಸಾಕು ಆದಾಯ, ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಯಾಕೆ ಎಂದರು.<br /> <br /> ಶಿರಸ್ತೇದಾರ್ ರಾಘವೇಂದ್ರ ಮಾತನಾಡಿ, ನಿವೇಶನಕ್ಕೆ ಖಾಸಗಿಯೊಬ್ಬರು ತಕರಾರು ಅರ್ಜಿ ಸಲ್ಲಿಸಿದ್ದಾರೆ, ಅದು ಪುರಸಭೆ ವ್ಯಾಪ್ತಿಯಲ್ಲಿ ದಾಖಲೆ ಇದೆ. ಲಿಫ್ಟ್ ಅಳವಡಿಸುವ ಬಗ್ಗೆ ಕಳೆದ ಆರು ತಿಂಗಳ ಹಿಂದೆ ಕಾಮಗಾರಿ ಕ್ರಿಯಾಯೋಜನೆ ಆಗಿದ್ದರೂ ನೂತನವಾಗಿ ಮತ್ತೆ ಕ್ರಿಯಾಯೋಜನೆ ಆಗಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ: </strong>ದೇವನಹಳ್ಳಿ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ಅಂಗವಿಕಲರ ಕುಂದು ಕೊರತೆ `ಸಭೆ ಶಿರಸ್ತೇದಾರ್ ರಾಘವೇಂದ್ರನ್ ಹಾಗೂ ಸಿಡಿಪಿಒ ಅಶ್ವಥಮ್ಮ ನೇತೃತ್ವದಲ್ಲಿ ನಡೆಯಿತು.<br /> <br /> ಸಭೆಯಲ್ಲಿ ಮಾತನಾಡಿದ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಸದಸ್ಯ ಕಾರ್ಯದರ್ಶಿ ಎಂ.ಮಂಜುನಾಥ್, ಅಂಗವಿಕಲರ ಸಮಸ್ಯೆಗೆ ಪ್ರತಿ ತಿಂಗಳು ಸಭೆ ನಡೆಸಿ ಕುಂದುಕೊರತೆ ಆಲಿಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಬೇಕು. ಇಲಾಖೆ ಅಧಿಕಾರಿಗಳು ಮೂರು ನಾಲ್ಕು ತಿಂಗಳಾದರೂ ಸಭೆ ನಡೆಸುತ್ತಿಲ್ಲ.</p>.<p>ಅಂಗವಿಕಲರ ಸಮಸ್ಯೆ ಆಲಿಸುವರೇ ಇಲ್ಲದಂತಾಗಿದೆ. ಅಂಗವಿಕಲರಿಗೆ ಮೀಸಲಿಟ್ಟ ಶೇ.3ರಷ್ಟು ಅನುದಾನ ಸದ್ಬಳಕೆಯಾಗುತ್ತಿಲ್ಲ. ಗ್ರಾ.ಪಂ. ಸೇರಿ ದಂತೆ ಎಲ್ಲಾ ಇಲಾಖೆಗಳು ನಿರ್ಲಕ್ಷ್ಯ ತೋರಿವೆ. ಅಯ್ಯೋಪಾಪ ಎಂದರೆ ನಮ್ಮ ಸಮಸ್ಯೆಗಳು ಈಡೇರುತ್ತವೆಯೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.<br /> <br /> ಕಳೆದ ಒಂದುವರೆ ವರ್ಷದಿಂದ ಅಂಗವಿಕಲರಿಗೆ ತಾಲ್ಲೂಕು ಕೇಂದ್ರದಲ್ಲಿ ಸಮುದಾಯಭವನಕ್ಕಾಗಿ ನಿವೇಶನ ಗುರುತಿಸುವಂತೆ ಮನವಿ ಮಾಡಿ, ಜಿಲ್ಲಾಧಿಕಾರಿಗಳಿಗೆ ಕಡತ ರವಾನಿಸಲಾಗಿದೆ. ಜಿಲ್ಲಾಧಿಕಾರಿಯವರು ಸ್ಥಳ ಗುರುತಿಸಿ ನಿವೇಶನದ ಸಾಧಕ ಬಾಧಕದ ಬಗ್ಗೆ ಪರಿಶೀಲಿಸಿ ವರದಿ ನೀಡಿ ಎಂದು ಆದೇಶ ನೀಡಿದ್ದರು.</p>.<p>ಕಂದಾಯ ಇಲಾಖೆ ಅಧಿಕಾರಿಗಳು ಕಡತವನ್ನು ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಕಚೇರಿಗಳಿಗೆ ಅಲೆದು ಸಾಕಾಗಿದೆ. ಮಿನಿ ವಿಧಾನಸೌಧ ಮೂರು ಅಂತಸ್ಥಿನ ಕಟ್ಟಡವಾಗಿರು ವುದರಿಂದ ಅಂಗವಿ ಕಲರು ವಿವಿಧ ಕೊಠಡಿಗಳಿಗೆ ತೆರಳಲು ಆಸಕ್ತರಾಗಿದ್ದರೆ ಎಂದರು.<br /> <br /> ತಾಲ್ಲೂಕು ಅಂಗವಿಕಲರ ಸಂಘ ಅಧ್ಯಕ್ಷ ಸುರೇಶ್ ಅಯ್ಯರ್ ಮಾತನಾಡಿ, ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವವರಿಗೆ ₹ 1300, ಶೇ.40 ರಿಂದ 75 ರಷ್ಟು ಹೊಂದಿರುವವರಿಗೆ ₹ 500 ಸಾಮಾಜಿಕ ಭದ್ರತೆಯಡಿ ಮಾಶಾಸನ ನೀಡಲಾಗುತ್ತಿದೆ.<br /> <br /> ಇದು ಸಮರ್ಪಕವಾಗಿ ಸಕಾಲದಲ್ಲಿ ಆಗುತ್ತಿಲ್ಲ. ಅಂಗವಿಕಲ ವೇತನ ಪಡೆಯಲು ಅಂಗವಿಕಲರ ದೃಢೀಕರಣ ಪತ್ರದ ನಕಲು ನೀಡಿದರೆ ಸಾಕು ಆದಾಯ, ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಯಾಕೆ ಎಂದರು.<br /> <br /> ಶಿರಸ್ತೇದಾರ್ ರಾಘವೇಂದ್ರ ಮಾತನಾಡಿ, ನಿವೇಶನಕ್ಕೆ ಖಾಸಗಿಯೊಬ್ಬರು ತಕರಾರು ಅರ್ಜಿ ಸಲ್ಲಿಸಿದ್ದಾರೆ, ಅದು ಪುರಸಭೆ ವ್ಯಾಪ್ತಿಯಲ್ಲಿ ದಾಖಲೆ ಇದೆ. ಲಿಫ್ಟ್ ಅಳವಡಿಸುವ ಬಗ್ಗೆ ಕಳೆದ ಆರು ತಿಂಗಳ ಹಿಂದೆ ಕಾಮಗಾರಿ ಕ್ರಿಯಾಯೋಜನೆ ಆಗಿದ್ದರೂ ನೂತನವಾಗಿ ಮತ್ತೆ ಕ್ರಿಯಾಯೋಜನೆ ಆಗಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>