<p><strong>ಶನಿವಾರಸಂತೆ: </strong>ಸಮೀಪದ ಕಾಜೂರು ಗ್ರಾಮದ ಹಸೈನಾರ್ ಮುಸ್ಲಿಯಾರ್ ಗೋಪಾಲಪುರದ ಬದ್ರಿಯಾ ಮದ್ರಸದಲ್ಲಿ 20 ವರ್ಷಗಳಿಂದ ಅಧ್ಯಾಪಕರಾಗಿದ್ದರು. ಕೊವಿಡ್-19 ಹಿನ್ನಲೆ ಮದ್ರಸ 6 ತಿಂಗಳಿನಿಂದ ಮುಚ್ಚಲ್ಪಟ್ಟು ಅಧ್ಯಾಪಕ ವೃತ್ತಿ ಸ್ಥಗಿತಗೊಂಡಿತು. ಜೀವನ ನಿರ್ವಹಣೆ ಕಷ್ಟಕರವಾಯಿತು. ಶಾಲೆ ಬಾಗಿಲು ತೆರೆಯಲು ಸರ್ಕಾರ ಮೀನ-ಮೇಷ ಎಣಿಸುತ್ತಿರುವುದರಿಂದ ಹಸೈನಾರ್ ಸಂಸಾರ ನಿರ್ವಹಣೆಗೆ ಬದಲಿ ವ್ಯವಸ್ಥೆ ಬಗ್ಗೆ ಆಲೋಚಿಸಿದರು.ವ್ಯಾಪಾರ ಆರಂಭಿಸಲು ನಿರ್ಧರಿಸಿದರು.</p>.<p>ಸೆಪ್ಟೆಂಬರ್ ಮೊದಲ ದಿನದಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ಮಳಿಗೆಯಲ್ಲಿ ತರಕಾರಿ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರು. ಹಾಸನ, ಅರಕಲಗೂಡಿನಿಂದ ತರಕಾರಿ ತಂದು ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿ ಬೆಲೆ ಗಗನಕ್ಕೇರಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರ ಅನುಕೂಲಕರವಾಗಿ ನಡೆಯುತ್ತಿದೆ.</p>.<p>’ಅರಬಿ ಶಾಲೆ ಶುರುವಾಗುವವರೆಗೆ ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತೇನೆ. ಶನಿವಾರಸಂತೆ ಸುತ್ತಮುತ್ತ ಕೋವಿಡ್ ವೈರಸ್ ವ್ಯಾಪಕವಾಗಿ ಹರಡಿದೆ. ಈ ಪಿಡುಗು ಆದಷ್ಟು ಬೇಗ ತೊಲಗಲಿ. ಜನರು ಹೆದರಿಕೆ ಬಿಟ್ಟು, ಹೊಣೆ ಅರಿತು, ಜೀವನ ಸಾಗಿಸುವಂತಾಗಲಿ. ಪ್ರತಿಯೊಬ್ಬರು ಅಂತರ ಕಾಯ್ದು, ಮಾಸ್ಕ್ ಧರಿಸಿ ಸರ್ಕಾರದ ನಿಯಮ ಪಾಲಿಸಿದರೆ ಮಾತ್ರ ಸುರಕ್ಷಿತವಾಗಿರಲು ಸಾಧ್ಯ’ ಎಂದು ಹಸೈನಾರ್ ಅಭಿಪ್ರಾಯ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ: </strong>ಸಮೀಪದ ಕಾಜೂರು ಗ್ರಾಮದ ಹಸೈನಾರ್ ಮುಸ್ಲಿಯಾರ್ ಗೋಪಾಲಪುರದ ಬದ್ರಿಯಾ ಮದ್ರಸದಲ್ಲಿ 20 ವರ್ಷಗಳಿಂದ ಅಧ್ಯಾಪಕರಾಗಿದ್ದರು. ಕೊವಿಡ್-19 ಹಿನ್ನಲೆ ಮದ್ರಸ 6 ತಿಂಗಳಿನಿಂದ ಮುಚ್ಚಲ್ಪಟ್ಟು ಅಧ್ಯಾಪಕ ವೃತ್ತಿ ಸ್ಥಗಿತಗೊಂಡಿತು. ಜೀವನ ನಿರ್ವಹಣೆ ಕಷ್ಟಕರವಾಯಿತು. ಶಾಲೆ ಬಾಗಿಲು ತೆರೆಯಲು ಸರ್ಕಾರ ಮೀನ-ಮೇಷ ಎಣಿಸುತ್ತಿರುವುದರಿಂದ ಹಸೈನಾರ್ ಸಂಸಾರ ನಿರ್ವಹಣೆಗೆ ಬದಲಿ ವ್ಯವಸ್ಥೆ ಬಗ್ಗೆ ಆಲೋಚಿಸಿದರು.ವ್ಯಾಪಾರ ಆರಂಭಿಸಲು ನಿರ್ಧರಿಸಿದರು.</p>.<p>ಸೆಪ್ಟೆಂಬರ್ ಮೊದಲ ದಿನದಿಂದ ದುಂಡಳ್ಳಿ ಗ್ರಾಮ ಪಂಚಾಯಿತಿ ಮಳಿಗೆಯಲ್ಲಿ ತರಕಾರಿ ಅಂಗಡಿ ತೆರೆದು ವ್ಯಾಪಾರ ಆರಂಭಿಸಿದರು. ಹಾಸನ, ಅರಕಲಗೂಡಿನಿಂದ ತರಕಾರಿ ತಂದು ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿ ಬೆಲೆ ಗಗನಕ್ಕೇರಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ವ್ಯಾಪಾರ ಅನುಕೂಲಕರವಾಗಿ ನಡೆಯುತ್ತಿದೆ.</p>.<p>’ಅರಬಿ ಶಾಲೆ ಶುರುವಾಗುವವರೆಗೆ ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತೇನೆ. ಶನಿವಾರಸಂತೆ ಸುತ್ತಮುತ್ತ ಕೋವಿಡ್ ವೈರಸ್ ವ್ಯಾಪಕವಾಗಿ ಹರಡಿದೆ. ಈ ಪಿಡುಗು ಆದಷ್ಟು ಬೇಗ ತೊಲಗಲಿ. ಜನರು ಹೆದರಿಕೆ ಬಿಟ್ಟು, ಹೊಣೆ ಅರಿತು, ಜೀವನ ಸಾಗಿಸುವಂತಾಗಲಿ. ಪ್ರತಿಯೊಬ್ಬರು ಅಂತರ ಕಾಯ್ದು, ಮಾಸ್ಕ್ ಧರಿಸಿ ಸರ್ಕಾರದ ನಿಯಮ ಪಾಲಿಸಿದರೆ ಮಾತ್ರ ಸುರಕ್ಷಿತವಾಗಿರಲು ಸಾಧ್ಯ’ ಎಂದು ಹಸೈನಾರ್ ಅಭಿಪ್ರಾಯ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>