’ಅರಬಿ ಶಾಲೆ ಶುರುವಾಗುವವರೆಗೆ ತರಕಾರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತೇನೆ. ಶನಿವಾರಸಂತೆ ಸುತ್ತಮುತ್ತ ಕೋವಿಡ್ ವೈರಸ್ ವ್ಯಾಪಕವಾಗಿ ಹರಡಿದೆ. ಈ ಪಿಡುಗು ಆದಷ್ಟು ಬೇಗ ತೊಲಗಲಿ. ಜನರು ಹೆದರಿಕೆ ಬಿಟ್ಟು, ಹೊಣೆ ಅರಿತು, ಜೀವನ ಸಾಗಿಸುವಂತಾಗಲಿ. ಪ್ರತಿಯೊಬ್ಬರು ಅಂತರ ಕಾಯ್ದು, ಮಾಸ್ಕ್ ಧರಿಸಿ ಸರ್ಕಾರದ ನಿಯಮ ಪಾಲಿಸಿದರೆ ಮಾತ್ರ ಸುರಕ್ಷಿತವಾಗಿರಲು ಸಾಧ್ಯ’ ಎಂದು ಹಸೈನಾರ್ ಅಭಿಪ್ರಾಯ ವ್ಯಕ್ತಪಡಿಸಿದರು.