ಮೌಲಾಸಾಬ ಇಮಾಮಸಾಬ ನದಾಫ ಅಲಿಯಾಸ್ ಪಿಂಜಾರ (55) ಶಿಕ್ಷೆಗೆ ಗುರಿಯಾದವರು. ಅವರ ಜಮೀನಿನ ಮೇಲೆ ದಾಳಿ ಮಾಡಿದ್ದ ಪೊಲೀಸರು, ಅಲ್ಲಿ ಬೆಳೆಗಿದ್ದ ₹ 48ಸಾವಿರ ಮೌಲ್ಯದ 16 ಕೆ.ಜಿ. 7 ಗ್ರಾಂ. ತೂಕದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದರು. ₹ 2.88 ಲಕ್ಷ ಮೌಲ್ಯದ 24 ಕೆ.ಜಿ. ತೂಕದ ಒಣ ಗಾಂಜಾವನ್ನು ಶೆಡ್ನಲ್ಲಿ ಗೋಣಿಚೀಲದಲ್ಲಿ ಸಂಗ್ರಹಿಸಿಟ್ಟಿದ್ದನ್ನು ವಶಪಡಿಸಿಕೊಂಡಿದ್ದರು. ಇಮಾಮಸಾಬ ಅವರನ್ನು ಬಂಧಿಸಿದ್ದ ಆಗಿನ ಡಿಸಿಆರ್ಬಿ ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.