<p>ಚೆನ್ನಮ್ಮನ ಕಿತ್ತೂರು: `ಅತಿಕ್ರಮಣ, ಅಕ್ರಮ ಕಟ್ಟಡಗಳ ತೆರವು ಹಾಗೂ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಪಟ್ಟ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇದೇ 15ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ದೇಶಭಕ್ತ ನಾಗರಿಕರು, ಮಹಿಳಾ, ಕನ್ನಡ ಸಂಘಟನೆಗಳು ಹಾಗೂ ಪ್ರಮುಖ ಸಾಹಿತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ~ ಎಂದು ಕಿತ್ತೂರು ಸಂಸ್ಥಾನ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಪ್ರಮೋದ ಮುತಾಲಿಕ ಪ್ರಕಟಿಸಿದರು.<br /> <br /> ಖಾನಾಪುರ ತಾಲ್ಲೂಕಿನ ತೊಲಗಿ ಗ್ರಾಮಕ್ಕೆ ಆಗಮಿಸಿದ ವೀರಜ್ಯೋತಿ ಯನ್ನು ಬರಮಾಡಿಕೊಂಡ ನಂತರ ಅವರು ಮಾತನಾಡಿದರು. <br /> <br /> `ಕಳೆದ 10ರಿಂದ ಬೈಲಹೊಂಗಲದಿಂದ ನಾಡಿನಾದ್ಯಂತ ಸಂಚಾರ ಆರಂಭಿಸಿದ ಕಿತ್ತೂರು ಉತ್ಸವದ ವೀರಜ್ಯೋತಿ ಯಾತ್ರೆಯ ಚಾಲನಾ ಸಮಾರಂಭಕ್ಕೆ ಕಿತ್ತೂರು ರಾಜವಂಶಸ್ಥರಾದ ದೇಸಾಯಿ ಕುಟುಂಬದವರನ್ನು ಆಮಂತ್ರಿಸದೇ ಕಡೆಗಣಿಸಲಾಯಿತು. ಬರೀ ಬಾಯಿ ಮಾತಿನಲ್ಲಿ ಇವರಿಗೆ ಗೌರವ ತೋರಿಸುತ್ತಿರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿಲುವು ಖಂಡನೀಯ~ ಎಂದರು.<br /> <br /> `ಜ್ಯೋತಿ ರಥಯಾತ್ರೆಯ ಸಿಂಗಾರ ಅಷ್ಟೊಂದು ಶೋಭಾಯಮಾನ ವಾಗಿಲ್ಲ. ವಾಹನಕ್ಕೆ ಯಾವುದೇ ರಕ್ಷಣೆ ಇಲ್ಲವಾಗಿದೆ. ಮಳೆ ಬಂದರೆ ಹೊತ್ತಿರುವ ಜ್ಯೋತಿಯನ್ನು ಆರಿಸಿ ಅದಕ್ಕೆ ಪ್ಲ್ಯಾಸ್ಟಿಕ್ ಚೀಲ ಹೊದಿಸಲಾಗುತ್ತಿದೆ~ ಎಂದು ದೂರಿದರು.<br /> <br /> ಯಾವುದೇ ರಾಜಕಾರಣಿಗಳು ಅಥವಾ ಅಧಿಕಾರಿಗಳು ಕರೆಯದಿದ್ದರೂ ತೋಲಗಿ ಗ್ರಾಮಕ್ಕೆ ಜ್ಯೋತಿಯಾತ್ರೆ ಆಗಮಿಸಿದಾಗ 11ಜನ ರಾಜವಂಶಸ್ಥ ಕುಟುಂಬದವರು ಅದಕ್ಕೆ ಪೂಜೆ ಸಲ್ಲಿಸಿ ಗೌರವ ಸೂಚಿಸಿದ ಕ್ರಮವನ್ನು ಮುತಾಲಿಕ ಅವರು ಕೊಂಡಾಡಿದರು.<br /> <br /> ಸ್ವಾಗತಾರ್ಹ: `ಅ. 23ರ ರಾಣಿ ಚೆನ್ನಮ್ಮಾಜಿ ವಿಜಯೋತ್ಸವ ದಿನವನ್ನು ರಾಜ್ಯದಾದ್ಯಂತ ಆಚರಿಸಬೇಕು ಹಾಗೂ ಅಂದು ಸಾರ್ವತ್ರಿಕ ರಜೆ ಘೋಷಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಯನ್ನು ತಾವು ಸ್ವಾಗತಿಸುವುದಾಗಿ~ ಮುತಾಲಿಕ ತಿಳಿಸಿದರು.<br /> <br /> `ರಾಜಕಾರಣಿಗಳ ವೈಭವ ಮತ್ತು ಅವರ ಪಕ್ಷದ ಪ್ರಚಾರಕ್ಕಾಗಿ ಉತ್ಸವ ನಡೆಸುತ್ತಿರುವುದನ್ನು ಸಮಿತಿ ಖಂಡಿಸುತ್ತದೆ~ ಎಂದೂ ಅವರು ಹೇಳಿದರು. ರಾಜ ವಂಶಸ್ಥ ಮಲ್ಲಸರ್ಜ ದೇಸಾಯಿ, ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವನಸಿಂಗ್ ಮೊಕಾಶಿ, ಕಾರ್ಯಾಧ್ಯಕ್ಷ ಹಾಗೂ ವಂಶಜ ಉದಯಕುಮಾರ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೆನ್ನಮ್ಮನ ಕಿತ್ತೂರು: `ಅತಿಕ್ರಮಣ, ಅಕ್ರಮ ಕಟ್ಟಡಗಳ ತೆರವು ಹಾಗೂ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಪಟ್ಟ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇದೇ 15ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ದೇಶಭಕ್ತ ನಾಗರಿಕರು, ಮಹಿಳಾ, ಕನ್ನಡ ಸಂಘಟನೆಗಳು ಹಾಗೂ ಪ್ರಮುಖ ಸಾಹಿತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ~ ಎಂದು ಕಿತ್ತೂರು ಸಂಸ್ಥಾನ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಪ್ರಮೋದ ಮುತಾಲಿಕ ಪ್ರಕಟಿಸಿದರು.<br /> <br /> ಖಾನಾಪುರ ತಾಲ್ಲೂಕಿನ ತೊಲಗಿ ಗ್ರಾಮಕ್ಕೆ ಆಗಮಿಸಿದ ವೀರಜ್ಯೋತಿ ಯನ್ನು ಬರಮಾಡಿಕೊಂಡ ನಂತರ ಅವರು ಮಾತನಾಡಿದರು. <br /> <br /> `ಕಳೆದ 10ರಿಂದ ಬೈಲಹೊಂಗಲದಿಂದ ನಾಡಿನಾದ್ಯಂತ ಸಂಚಾರ ಆರಂಭಿಸಿದ ಕಿತ್ತೂರು ಉತ್ಸವದ ವೀರಜ್ಯೋತಿ ಯಾತ್ರೆಯ ಚಾಲನಾ ಸಮಾರಂಭಕ್ಕೆ ಕಿತ್ತೂರು ರಾಜವಂಶಸ್ಥರಾದ ದೇಸಾಯಿ ಕುಟುಂಬದವರನ್ನು ಆಮಂತ್ರಿಸದೇ ಕಡೆಗಣಿಸಲಾಯಿತು. ಬರೀ ಬಾಯಿ ಮಾತಿನಲ್ಲಿ ಇವರಿಗೆ ಗೌರವ ತೋರಿಸುತ್ತಿರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳ ನಿಲುವು ಖಂಡನೀಯ~ ಎಂದರು.<br /> <br /> `ಜ್ಯೋತಿ ರಥಯಾತ್ರೆಯ ಸಿಂಗಾರ ಅಷ್ಟೊಂದು ಶೋಭಾಯಮಾನ ವಾಗಿಲ್ಲ. ವಾಹನಕ್ಕೆ ಯಾವುದೇ ರಕ್ಷಣೆ ಇಲ್ಲವಾಗಿದೆ. ಮಳೆ ಬಂದರೆ ಹೊತ್ತಿರುವ ಜ್ಯೋತಿಯನ್ನು ಆರಿಸಿ ಅದಕ್ಕೆ ಪ್ಲ್ಯಾಸ್ಟಿಕ್ ಚೀಲ ಹೊದಿಸಲಾಗುತ್ತಿದೆ~ ಎಂದು ದೂರಿದರು.<br /> <br /> ಯಾವುದೇ ರಾಜಕಾರಣಿಗಳು ಅಥವಾ ಅಧಿಕಾರಿಗಳು ಕರೆಯದಿದ್ದರೂ ತೋಲಗಿ ಗ್ರಾಮಕ್ಕೆ ಜ್ಯೋತಿಯಾತ್ರೆ ಆಗಮಿಸಿದಾಗ 11ಜನ ರಾಜವಂಶಸ್ಥ ಕುಟುಂಬದವರು ಅದಕ್ಕೆ ಪೂಜೆ ಸಲ್ಲಿಸಿ ಗೌರವ ಸೂಚಿಸಿದ ಕ್ರಮವನ್ನು ಮುತಾಲಿಕ ಅವರು ಕೊಂಡಾಡಿದರು.<br /> <br /> ಸ್ವಾಗತಾರ್ಹ: `ಅ. 23ರ ರಾಣಿ ಚೆನ್ನಮ್ಮಾಜಿ ವಿಜಯೋತ್ಸವ ದಿನವನ್ನು ರಾಜ್ಯದಾದ್ಯಂತ ಆಚರಿಸಬೇಕು ಹಾಗೂ ಅಂದು ಸಾರ್ವತ್ರಿಕ ರಜೆ ಘೋಷಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಯನ್ನು ತಾವು ಸ್ವಾಗತಿಸುವುದಾಗಿ~ ಮುತಾಲಿಕ ತಿಳಿಸಿದರು.<br /> <br /> `ರಾಜಕಾರಣಿಗಳ ವೈಭವ ಮತ್ತು ಅವರ ಪಕ್ಷದ ಪ್ರಚಾರಕ್ಕಾಗಿ ಉತ್ಸವ ನಡೆಸುತ್ತಿರುವುದನ್ನು ಸಮಿತಿ ಖಂಡಿಸುತ್ತದೆ~ ಎಂದೂ ಅವರು ಹೇಳಿದರು. ರಾಜ ವಂಶಸ್ಥ ಮಲ್ಲಸರ್ಜ ದೇಸಾಯಿ, ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವನಸಿಂಗ್ ಮೊಕಾಶಿ, ಕಾರ್ಯಾಧ್ಯಕ್ಷ ಹಾಗೂ ವಂಶಜ ಉದಯಕುಮಾರ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>