ಇದು ಸಮಾಧಾನ ಮಾತ್ರ. ತೃಪ್ತಿದಾಯಕ ಅಲ್ಲ. ನಾವು ಮುರಗೋಡ ಕೇಂದ್ರವಾಗಿ ತಾಲ್ಲೂಕು ರಚನೆ ಮಾಡಿ ಎಂಬ ಹೋರಾಟ ಮಾಡುತ್ತಿದ್ದೇವೆ. ಈಗ ತಾಲ್ಲೂಕು ಕೇಂದ್ರ ಹತ್ತಿರವಾಗಬಹುದು. ಆದರೆ ಹೊಸ ತಾಲ್ಲೂಕಿನ ಹೋರಾಟ ಹಾಗೇ ಇರುತ್ತದೆ. ಅಂದಾಜು 2.5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಪ್ರದೇಶವನ್ನು ತಾಲ್ಲೂಕು ಮಾಡದೇ ಬೇರೆ ದಾರಿ ಇಲ್ಲ.
–ಎಫ್.ಎಸ್.ಸಿದ್ದನಗೌಡ ಮುರಗೋಡ ತಾಲ್ಲೂಕು ಹೋರಾಟಗಾರ
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರ ಪ್ರಯತ್ನವೂ ಈ ಯಶಸ್ಸಿಗೆ ಕಾರಣ. ಕಂದಾಯ ಕೆಲಸ ಕೋರ್ಟ್ ಕಚೇರಿ ಶಿಕ್ಷಣಕ್ಕೆ ದೂರದ ಸವದತ್ತಿಗೆ ಹೋಗಬೇಕಾಗಿತ್ತು. ಈಗ ಬೈಲಹೊಂಗಲ ಎಲ್ಲದಕ್ಕೂ ಸಮೀಪ ಆಗುವುದರಿಂದ ಜನರ ಹಣ ಸಾರಿಗೆ ವೆಚ್ಚ ಸಮಯ ಹಾಗೂ ತುರ್ತು ಸಂದರ್ಭಗಳಲ್ಲಿ ಎದುರಾಗುತ್ತಿದ್ದ ಸಮಸ್ಯೆಗಳು ನಿವಾರಣೆ ಆಗಲಿವೆ. ಈ ವಿಂಗಡಣೆ ಕೆಲಸ ವಿಳಂಬ ಮಾಡಬಾರದು.
–ಜಿ.ಬಿ.ಗಿರಿಜನ್ನವರ ವಕೀಲರು ಬೈಲಹೊಂಗಲ
ಹಳ್ಳಿಗಳನ್ನು ಬೈಲಹೊಂಗಲಕ್ಕೆ ಸೇರಿಸಬೇಕು ಎಂಬುದು ನಮ್ಮ ಹೋರಾಟದ ಉದ್ದೇಶವಾಗಿರಲಿಲ್ಲ. ಪ್ರತ್ಯೇಕ ತಾಲ್ಲೂಕು ರಚನೆ ಮಾಡಬೇಕು ಎಂಬುದೇ ಗುರಿ. ಈಗ ನಡೆದ ಬೆಳವಣಿಗೆಯಿಂದ ತಾಲ್ಲೂಕು ಹೋರಾಟಕ್ಕೆ ಹಿನ್ನಡೆ ಆಗಿದೆ. ಇದಕ್ಕೆ ನನ್ನ ವಿರೋಧವಿದೆ.
–ಶಂಕರಯ್ಯ ಮಲ್ಲಯ್ಯನವರ ಮುರಗೋಡ ತಾಲ್ಲೂಕು ಹೋರಾಟಗಾರ
ಬೈಲಹೊಂಗಲಕ್ಕೆ 35 ಹಳ್ಳಿ ಸೇರಿಸಿದ ನಿರ್ಧಾರ ಸಮರ್ಪಕವಾಗಿದೆ. ನಮಗೆ ಐತಿಹಾಸಿಕ ಮಹತ್ವವೂ ಸಿಕ್ಕಂತಾಗಿದೆ. ಹೊಸ ತಾಲ್ಲೂಕು ಹೋರಾಟ ಬೇಡ. ಬೈಲಹೊಂಗಲವೇ ಹಿಂದಿನಿಂದಲೂ ನಮ್ಮ ಭಾವನಾತ್ಮಕ ತಾಲ್ಲೂಕು ಆಗಿದೆ.