‘ವಿದ್ಯುತ್ ಪರಿವರ್ತಕ ಒಳಗೊಂಡ ಕಂಬ ಏರಿದವನು ಮಾನಸಿಕ ಅಸ್ವಸ್ಥನಾಗಿದ್ದಾನೆ. ಏಕೆ ಹೀಗೆ ವರ್ತಿಸುತ್ತಿದ್ದೇನೆ ಎಂದು ಸ್ವತಃ ಅವನಿಗೆ ಗೊತ್ತಿಲ್ಲ. ವಿಚಾರಣೆ ನಡೆಸಿದರೂ, ತನ್ನ ಹೆಸರು ಮತ್ತು ಊರಿನ ವಿಳಾಸ ತಿಳಿಸಲಿಲ್ಲ. ಮುಂದೆ ಹೀಗೆ ವರ್ತಿಸದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದೇವೆ’ ಎಂದು ಖಡೇಬಜಾರ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.