ತಾಲ್ಲೂಕಿನ ಗಣೇಶನಗರದ ನಿವಾಸಿ ಹಾಗೂ ಅಪೂರ್ವಾ ಕನ್ಸ್ಟ್ರಕ್ಷನ್ ಯೋಜನಾ ವ್ಯವಸ್ಥಾಪಕ ಸಂಜೀವಕುಮಾರ ನವಲಗುಂದ ದೂರು ನೀಡಿದ್ದರು. ‘ಕಂಪನಿಯಿಂದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ವಹಿಸಿದ ನಗರ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಯ ಬಿಲ್ ಮಂಜೂರು ಮಾಡಲು ಸಿದ್ದನಾಯ್ಕ, ಹಿಂದಿನ ಬಿಲ್ನಲ್ಲಿ ಶೇ 0.5ರಷ್ಟು ಅಂದರೆ ₹60 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದರು.