ಕೃಷಿ ಇಲಾಖೆ ಸಚಿವಾಲಯ ವಿಭಾಗದ ಜಾಗೃತ ದಳದ ಅಧಿಕಾರಿಗಳಾದ ಆರ್.ಬಿ. ಪಾಟೀಲ ಮತ್ತು ಸುಪ್ರೀತಾ ಅಂಗಡಿ ದಾಳಿ ನಡೆಸಿದ್ದಾರೆ. ಆ ಅಂಗಡಿಯ ಮಾಲೀಕ ಚಿದಾನಂದ ಎಸ್. ಕತ್ತಿ ಅವರು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಕೃಷಿ ಇಲಾಖೆಯಿಂದ ಪರವಾನಗಿ ಇಲ್ಲದೆ ಮಾರಾಟ ಮಾಡುತ್ತಿದ್ದುದ್ದನ್ನು ಪತ್ತೆ ಹಚ್ಚಿದ್ದಾರೆ. ದರಪಟ್ಟಿ, ದಾಸ್ತಾನು ಸೇರಿದಂತೆ ಇತರ ಯಾವುದೇ ದಾಖಲೆಗಳನ್ನು ನಿರ್ವಹಿಸದೆ ಮಾರುತ್ತಿದ್ದುದ್ದಲ್ಲದೇ, ರೈತರಿಗೆ ಬಿಲ್ ಕೊಡದಿರುವುದು ಕೂಡ ಕಂಡುಬಂದಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದ್ದಾರೆ.