ಬೆಳಗಾವಿ: ಖಾನಾಪುರದಲ್ಲಿ ಈಚೆಗೆ ನಡೆದಿರುವ ಅರ್ಬಾಜ್ ಮುಲ್ಲಾ ಅನುಮಾನಾಸ್ಪದ ಸಾವಿನ ಪ್ರಕರಣದ ಸತ್ಯಶೋಧನೆಗಾಗಿ ಬೆಂಗಳೂರಿನಿಂದ ಇಲ್ಲಿಗೆ ಗುರುವಾರ ಭೇಟಿ ನೀಡಿದ್ದ ಪ್ರಗತಿಪರ ಯುವಜನರನ್ನೊಳಗೊಂಡ ತಂಡ ಹಲವು ಮಾಹಿತಿಯನ್ನು ಕಲೆಹಾಕಿತು.
ಅರ್ಜಾಜ್ ತಾಯಿ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಸಂಘಟನೆಗಳ ಮುಖಂಡರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
‘ಸಂಪೂರ್ಣವಾಗಿ ಮಾಹಿತಿ ಸಂಗ್ರಹಿಸಿ ಬಳಿಕ, ಸತ್ಯಶೋಧನಾ ವರದಿ ಪ್ರಕಟಿಸಲಾಗುವುದು. ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ತಂಡದ ಸದಸ್ಯ ಆಕಾಶ್ ಬಟ್ಟಾಚಾರ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ವಕೀಲ ಅವನಿ ಚೌಕ್ಸಿ, ನಿಜಾಮುದ್ದೀನ್, ಸಿದ್ದಾರ್ಥ ಜೋಶಿ, ತನ್ವೀರ್ ಅಹಮದ್, ಜಾಕೀರ್, ಜುನೇದ್ ಒಳಗೊಂಡ ತಂಡವು ವರದಿ ಸಿದ್ಧಪಡಿಸುತ್ತಿದೆ. ಮಾನವ ಹಕ್ಕುಗಳ ಆಯೋಗಕ್ಕೂ ವರದಿ ಸಲ್ಲಿಸುವುದಾಗಿ ತಿಳಿಸಿದೆ.