ತೆಲಸಂಗ: ‘ವಿಶ್ವ ಪರಿಸರ ದಿನದ ಅಂಗವಾಗಿ ಅಥಣಿ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಜೂನ್ 5ರಂದು 105 ಗ್ರಾಮ ಪಂಚಾಯಿತಿಗಳ ಮೂಲಕ 30ಸಾವಿರ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ರವಿ ಬಂಗಾರೆಪ್ಪನವರ ತಿಳಿಸಿದರು.
ಗ್ರಾಮದಲ್ಲಿ ಸಸಿ ನೆಡಲು ಗುರುತಿಸಿರುವ ಸ್ಥಳಗಳನ್ನು ಗುರುವಾರ ವೀಕ್ಷಿಸಿ ಅವರು ಮಾತನಾಡಿದರು.
‘ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳು ಕಾರ್ಯಕ್ರಮ ನಡೆಸಿ, ಪರಿಸರ ಜಾಗೃತಿ ಮೂಡಿಸುವುದು ಮತ್ತು ಹೆಚ್ಚೆಚ್ಚು ಸಸಿ ನೆಡುವ ಕಾರ್ಯಕ್ಕೆ ಒತ್ತು ಕೊಡುವುದು ಕಡ್ಡಾಯವಾಗಿದೆ. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮುಂಜಾಗ್ರತೆ ವಹಿಸಬೇಕು’ ಎಂದರು.
ವೈದ್ಯಾಧಿಕಾರಿ ಡಾ.ವಾಸಂತಿ, ಪಿಡಿಒ ಬೀರಪ್ಪ ಕಡಗಂಚಿ, ವಿನೋದ ಪಾಟೀಲ, ಸಂಗಮೇಶ ಕುಮಠಳ್ಳಿ ಇದ್ದರು.