‘ಮುಸ್ಲಿಂ ಸಮಾಜಕ್ಕೆ ಎಚ್ಚರಿಕೆ ನೀಡುತ್ತೇನೆ’:
‘ನಾನು ಶಾಸಕನಾದ ಮೇಲೆ ನಾಲ್ಕೂವರೆ ವರ್ಷಗಳಿಂದ ಹಿಂದೂ– ಮುಸ್ಲಿಂ ಗಲಾಟೆ ನಡೆದಿಲ್ಲ. ಇಂದು ಮುಸ್ಲಿಮರಿಗೂ ಹಬ್ಬವಿದೆ ಹಿಂದೂಗಳಿಗೂ ಚರಗ ಚೆಲ್ಲುವ ಸಂಭ್ರಮವಿದೆ. ಇಂಥ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಸಿದ್ದು ಖಂಡನೀಯ. ನಾನು ಮುಸ್ಲಿಂ ಸಮಾಜದವರಿಗೆ ಎಚ್ಚರಿಕೆ ಕೊಡುತ್ತೇನೆ. ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಬುದ್ಧಿ ಹೇಳಿ, ಅವರ ಸಂಗದಲ್ಲಿರುವ ಗೂಂಡಾಗಳಿಗೂ ಎಚ್ಚರಿಕೆ ಕೊಡಿ. ಇದು ಹೀಗೇ ಮುಂದುವರಿದರೆ ಮುಂದೆ ಬೇರೇನೇ ನಡೆಯುತ್ತದೆ’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ಆಸ್ಪತ್ರೆಗೆ ದೌಡಾಯಿಸಿ ಯುವಕರ ಆರೋಗ್ಯ ವಿಚಾರಿಸಿದ ನಂತರ ಅವರು ಮಾಧ್ಯಮದವರ ಮುಂದೆ ಮಾತನಾಡಿದರು.