ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಳಗಾವಿ |ಅಗ್ನಿ ದುರಂತ: ಕಾರ್ಮಿಕ ಸಾವು

Published : 7 ಆಗಸ್ಟ್ 2024, 23:51 IST
Last Updated : 7 ಆಗಸ್ಟ್ 2024, 23:51 IST
ಫಾಲೋ ಮಾಡಿ
Comments
ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿನ ಸ್ನೇಹಂ ಕಾರ್ಖಾನೆ ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿಯಿತು
– ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿನ ಸ್ನೇಹಂ ಕಾರ್ಖಾನೆ ಬೆಂಕಿ ಕೆನ್ನಾಲಿಗೆಗೆ ಹೊತ್ತಿ ಉರಿಯಿತು – ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ನಾವಗೆ ಬಳಿಯ ಕರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಅವರ ದೇಹದ ಅವಶೇಷಗಳನ್ನು ತಂದೆ ಸಣ್ಣಗೌಡ ಅವರಿಗೆ ಕೈಚೀಲದಲ್ಲಿ ಹಾಕಿ ಕೊಡಲಾಯಿತು
– ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ನಾವಗೆ ಬಳಿಯ ಕರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಅವರ ದೇಹದ ಅವಶೇಷಗಳನ್ನು ತಂದೆ ಸಣ್ಣಗೌಡ ಅವರಿಗೆ ಕೈಚೀಲದಲ್ಲಿ ಹಾಕಿ ಕೊಡಲಾಯಿತು – ಪ್ರಜಾವಾಣಿ ಚಿತ್ರ
ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ
ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ
ಕೈಚೀಲದಲ್ಲಿ ಮೃತ ಮಗನ ಅವಶೇಷ
ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ಅವರ ದೇಹ ಸಂಪೂರ್ಣ ಸುಟ್ಟು ಬೂದಿಯಾಗಿತ್ತು. ಲಿಫ್ಟ್‌ನಲ್ಲಿ ಸಣ್ಣಪುಟ್ಟ ಅವಶೇಷಗಳಿದ್ದವು. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲೇ ಮಹಜರು ನಡೆಸಿದರು. ನಂತರ ಅವರ ದೇಹದ ಅವಶೇಷಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ, ತಂದೆ ಸಣ್ಣಗೌಡ ಅವರ ಕೈಗೆ ಕೊಟ್ಟರು. ಅವಶೇಷಗಳಿದ್ದ ಪ್ಲಾಸ್ಟಿಕ್ ಚೀಲವನ್ನು ಸಣ್ಣಗೌಡರು ಕೈಚೀಲದಲ್ಲಿ ಹಾಕಿಕೊಂಡು ಮನೆಗೆ ಹೋದರು. ನೋವಿನಲ್ಲಿ ಹೋಗುತ್ತಿದ್ದ ಅವರನ್ನು ಕಂಡು ಹಲವರು ಮರುಗಿದರು. ‘ಶವಕ್ಕೆ ಜಿಲ್ಲಾಡಳಿತ ಕನಿಷ್ಠ ಗೌರವವೂ ನೀಡಲಿಲ್ಲ. ಸ್ಥಳದಲ್ಲಿಆಂಬುಲೆನ್ಸ್‌ಗಳಿದ್ದರೂ ಕೈಚೀಲದಲ್ಲಿ ದೇಹದ ಅವಶೇಷಗಳನ್ನು ಹಾಕಿ ಕೊಟ್ಟಿದೆ’ ಎಂದು ಕಾರ್ಮಿಕರು ನೋವಿನಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT