ಚಿಕ್ಕೋಡಿ ಪಟ್ಟಣದ ಪುರಸಭೆಯ ನೂತನ ಕಟ್ಟಡ
ಖಾನಾಪುರ ಪಟ್ಟಣದ ಹಳೆಯ ನ್ಯಾಯಾಲಯ ಕಟ್ಟಡ
ಹುಕ್ಕೇರಿ ಹೊರವಲಯದಲ್ಲಿ ನಿರ್ಮಿಸಿದ ‘ಪ್ರಾದೇಶಿಕ ಸುವರ್ಣ ಕರ್ನಾಟಕ ಭವನ’ ಪಾಳುಬಿದ್ದಿದೆ
ಬೆಳಗಾವಿಯ ಟಿಳಕವಾಡಿಯ ಮೊದಲ ರೈಲ್ವೆ ಗೇಟ್ ಬಳಿ ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಿದ ಕಲಾ ಮಂದಿರ ಉದ್ಘಾಟನೆಯಾಗಿ ಎಂಟು ತಿಂಗಳಾದರೂ ಬಳಕೆಗೆ ಮುಕ್ತವಾಗಿಲ್ಲ

ಮುಗಳಖೋಡದ ಕೆಲವು ಸರ್ಕಾರಿ ಕಟ್ಟಡಗಳು ಕಳೆದ ಹಲವು ವರ್ಷಗಳಿಂದಲೂ ನಿರುಪಯುಕ್ತವಾಗಿ ನಿಂತಿವೆ. ಆರೋಗ್ಯ ಉಪ ಕೇಂದ್ರ ಕಳೆದ 15 ವರ್ಷಗಳಿಂದ ಮಲ ಮೂತ್ರ ವಿಸರ್ಜನೆಯ ಕೇಂದ್ರವಾಗಿ ಬದಲಾಗಿದೆ. ಇದರ ಪಕ್ಕದಲ್ಲಿಯೇ ಇರುವ ವೃತ್ತಾಕಾರದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವು ಕೂಡ ಕಳೆದ 25 ವರ್ಷಗಳಿಂದ ಅನಾಥವಾಗಿ ನಿಂತಿದೆ. 15 ವರ್ಷಗಳಿಂದ ಶಿಕ್ಷಕರ ವಸತಿ ಗ್ರಹದ ಕಥೆ ಇದಕ್ಕಿಂತ ಭಿನ್ನವೇನಿಲ್ಲ.
ರಾಜಶೇಖರ ಮೊದಲಿನವರ ನಿವಾಸಿ ರಾಯಬಾಗ
ಬೈಲಹೊಂಗಲ ತಹಶೀಲ್ದಾರ ಕಚೇರಿಯ ವಸತಿ ಗೃಹಗಳು ಬಳಕೆಯಾಗಿಲ್ಲ. ಸದ್ಯ ನಾಯಿ– ಹಂದಿಗಳ ವಾಸಕ್ಕೆ ಮೀಸಲಾಗಿವೆ. ಯರಗಟ್ಟಿ ಎಪಿಎಂಸಿ ಆವರಣದಲ್ಲಿರುವ ಕಟ್ಟಡ ಬಳಕೆಯಾಗಿದೆ ಹಾಳು ಬಿದ್ದಿದೆ. ಜನರ ದುಡ್ಡು ವ್ಯರ್ಥವಾಗುತ್ತಿದೆ.
ಮಹಾಂತೇಶ ಪರಸಗಡ ಖಾಸಗಿ ಉದ್ಯೋಗಿ
ಬೈಲಹೊಂಗಲ ತಹಶೀಲ್ದಾರ ಕಚೇರಿಯ ವಸತಿ ಗೃಹಗಳು ಬಳಕೆಯಾಗಿಲ್ಲ. ಸದ್ಯ ನಾಯಿ– ಹಂದಿಗಳ ವಾಸಕ್ಕೆ ಮೀಸಲಾಗಿವೆ. ಯರಗಟ್ಟಿ ಎಪಿಎಂಸಿ ಆವರಣದಲ್ಲಿರುವ ಕಟ್ಟಡ ಬಳಕೆಯಾಗಿದೆ ಹಾಳು ಬಿದ್ದಿದೆ. ಜನರ ದುಡ್ಡು ವ್ಯರ್ಥವಾಗುತ್ತಿದೆ.
ಮಹಾಂತೇಶ ಪರಸಗಡ ಖಾಸಗಿ ಉದ್ಯೋಗಿ
ಖಾನಾಪುರದ ಹಳೆಯ ನ್ಯಾಯಾಲಯ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಸುತ್ತಮುತ್ತ ಮದ್ಯದಂಗಡಿಗಳಿರುವ ಕಾರಣ ಈ ಕಟ್ಟಡ ಅನಧಿಕೃತ ಬಾರ್ ಆಗಿ ಪರಿವರ್ತನೆ ಆಗುತ್ತಿದೆ. ಮಾಂಸದ ಅಂಗಡಿಗಳು ತಲೆ ಎತ್ತುತ್ತವೆ. 20ಕ್ಕೂ ಹೆಚ್ಚು ಅಕ್ರಮ ಮಳಿಗೆಗಳು ನಿರ್ಮಾಣವಾಗಿವೆ.
ಆಶಾರಾಣಿ ಕೊಳಚೇರ ಗೃಹಿಣಿ