ಬೆಳಗಾವಿ: ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಜಿಲ್ಲೆಯ ಕಾಗವಾಡ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಈತನೊಂದಿಗೆ ಸಂಪರ್ಕದಲ್ಲಿದ್ದ ದೆಹಲಿಯ ಇನ್ನೊಬ್ಬ ವ್ಯಕ್ತಿ ಮೇಲೂ ಎಫ್ಐಆರ್ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ 21 ವರ್ಷದ ಯುವಕಬಂಧಿತ. ದೆಹಲಿಯ ವ್ಯಕ್ತಿ ಜತೆಗೆ ಈತ ಸಂಪರ್ಕದಲ್ಲಿದ್ದ. ರೇಹಾನ್ ಹೆಸರೂ ಕೃತ್ಯದಲ್ಲಿದೆ. ಆದರೆ ಆತನ ಬಂಧನದ ವಿಷಯ ಖಚಿತವಾಗಿಲ್ಲ. ಜುಲೈ 31ರಂದೇ ಕಾಗವಾಡ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಇಬ್ಬರೂ ವಾಟ್ಸ್ಆ್ಯಪ್ ಗ್ರೂಪ್ ರಚಿಸಿಕೊಂಡು ತಂಡ ಕಟ್ಟಿಕೊಂಡು ಹಳ್ಳಿಗಳಲ್ಲಿ ಮುಸ್ಲಿಂ ಯುವಕರನ್ನು ಗುಂಪುಗೂಡಿಸಿ ಕೋಮುದ್ವೇಷಕ್ಕೆ ಪ್ರಚೋದನೆ ನೀಡುವಲ್ಲಿ ನಿರತರಾಗಿದ್ದರು ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.