<p><strong>ಬೆಳಗಾವಿ:</strong> ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೇ ರಸ್ತೆ ಕಾಮಗಾರಿ ಮಾಡಿದ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಹೈಕೋರ್ಟ್ ಧಾರವಾಡ ಪೀಠ ತರಾಟೆ ತೆಗೆದುಕೊಂಡಿದೆ.</p> <p>‘ಭೂ ಮಾಲೀಕರಿಗೆ ₹20 ಕೋಟಿ ಪರಿಹಾರ ಕೊಡಬೇಕು ಇಲ್ಲವೇ ಭೂಮಿ ಮರಳಿಸಬೇಕು. ರಸ್ತೆಯನ್ನು ಸಂಪೂರ್ಣ ಕಿತ್ತೊಗೆಯಬೇಕು, ಅದರ ನಷ್ಟವನ್ನೂ ಭರಿಸಿಕೊಡಬೇಕು. ತಪ್ಪು ಮಾಡಿದ ಅಧಿಕಾರಿಗೆ ಕೊನೆಯವರೆಗೂ ಬಡ್ತಿ ಸಿಗದಂತೆ ಸೇವಾಪುಸ್ತಕದಲ್ಲಿ ಬರೆಯಬೇಕು’ ಎಂದು ಕಟ್ಟಪ್ಪಣೆ ಮಾಡಿದೆ.</p> <p>ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ‘ಈಗಿನ ಸರ್ಕಾರಗಳಿಗೆ ಸಭ್ಯತೆ ಉಳಿದಿಲ್ಲ. ಅಧಿಕಾರಿಗಳು ನ್ಯಾಯಾಲಯದ ಒಳ್ಳೆಯತನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಎಲ್ಲಿಯೂ ಇಷ್ಟು ಬೇಜವಾಬ್ದಾರಿ ಕಂಡಿಲ್ಲ. ಇಂಥ ಪ್ರಕರಣ ನೋಡಿಲ್ಲ’ ಎಂದರು.</p> <p>ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ನೋಡಿದ ನ್ಯಾಯಮೂರ್ತಿ, ‘ಖಾಸಗಿ ಭೂಮಿಯನ್ನು ದರೋಡೆ ಮಾಡಲು ಆಗುವುದಿಲ್ಲ. ಜನರಿಗೆ ತೊಂದರೆ ಆಗದಂತೆ ನಡೆದುಕೊಳ್ಳಬೇಕಲ್ಲವೇ? ನಾವೇನು ತಾಜ್ಮಹಲ್ ಕಟ್ಟಿಸಲು ಹೇಳುತ್ತಿದ್ದೇವೆಯೇ? ಸಂತ್ರಸ್ತರಿಗೆ ಪರಿಹಾರ ಕೊಡಿ ಅಷ್ಟೇ’ ಎಂದರು.</p> <p>‘ಒಂದೇ ದಿನದಲ್ಲಿ ಭೂಮಿ ಮರಳಿಸಬೇಕು. ನಿಮ್ಮ ವೈಯಕ್ತಿಕ ಖಾತೆಯಿಂದ ₹5 ಲಕ್ಷ ದಂಡ ಕೊಡಬೇಕು. ಅಲ್ಲದೇ ನಿಮಗೆ ಎಂದೂ ಬಡ್ತಿ ಸಿಗದಂತೆ ಸೇವಾಪುಸ್ತಕದಲ್ಲಿ ಸೇರಿಸಲಾಗುವುದು’ ಎಂದು ಅವರು ಎಚ್ಚರಿಸಿದರು.</p> <p>‘ದಂಡ ಹಾಗೂ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು. ನಾಲ್ಕು ದಿನ ಕಾಲಾವಕಾಶ ಕೊಡಬೇಕು’ ಎಂದು ಪಾಲಿಕೆ ಪರ ವಕೀಲ ಚೈತನ್ಯ ಮುನವಳ್ಳಿ ಮನವಿ ಮಾಡಿದರು.</p> <p>‘ಸ್ಮಾರ್ಟ್ಸಿಟಿ ಕಂಪನಿ ಕಾಮಗಾರಿ ಮಾಡಿದ್ದು, ಪಾಲಿಕೆಗೆ ಇನ್ನೂ ಪೂರ್ಣವಾಗಿ ಹಸ್ತಾಂತರ ಮಾಡಿಲ್ಲ. ಇದರಲ್ಲಿ ಸ್ಮಾರ್ಟ್ಸಿಟಿ ಅಧಿಕಾರಿಗಳದ್ದೂ ದೋಷವಿದೆ’ ಎಂದೂ ವಾದ ಮಾಡಿದರು.</p> <p>‘ಹಸ್ತಾಂತರ ಆಗಿಲ್ಲ ಎಂದಾದರೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗೊತ್ತುವಳಿ ಪಾಸ್ ಮಾಡಿ, ಪರಿಹಾರ ಹೇಗೆ ಘೋಷಿಸಿದಿರಿ’ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.</p> <p>‘ಸೋಮವಾರ (ಸೆ.23) ಒಳಗೆ ಭೂಮಿ ಮರಳಿಸಿದರೆ ದಂಡ– ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತೀರಿ. ಇಲ್ಲದಿದ್ದರೆ ಆಜ್ಞೆ ಪ್ರತಿ ಸಿದ್ಧವಾಗಿ ಇಟ್ಟಿರುತ್ತೇನೆ. ಅವತ್ತು ಸಹಿ ಮಾಡುತ್ತೇನೆ’ ಎಂದೂ ಕೊನೆಯ ಎಚ್ಚರಿಕೆ ನೀಡಿದರು.</p> <p>ಸಂತ್ರಸ್ತರ ಪರ ವಾದ ಮಾಡಿದ ವಕೀಲ ಆರ್.ಕೆ.ಪಾಟೀಲ, ‘ಇದು ಒಬ್ಬರ ಸಮಸ್ಯೆಯಲ್ಲ. ಈ ಅಧಿಕಾರಿಗಳು ಸಾರ್ವಜನಿಕರ ಕೋಟ್ಯಂತರ ಹಣ ಹಾಳು ಮಾಡಿದ್ದಾರೆ. ನ್ಯಾಯಾಲಯ ಅದನ್ನೂ ಪರಿಗಣಿಸಬೇಕು’ ಎಂದು ಕೋರಿದರು.</p> <p>ದ್ವಿಮುಖ ರಸ್ತೆಗೆ ಸ್ಮಾರ್ಟ್ಸಿಟಿಯಿಂದ ₹5.88 ಕೋಟಿ ವೆಚ್ಚ ಮಾಡಲಾಗಿದೆ. ಇದು ಬಂದಾದರೆ ನಗರದಿಂದ ಹಳೆ ಪಿಬಿ ರಸ್ತೆ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಲಿದೆ.</p> <h2><strong>ಪ್ರಕರಣ ಏನು?</strong></h2><p>ಬೆಳಗಾವಿ ನಗರದ ಎಸ್ಪಿಎಂ ಮಾರ್ಗದಲ್ಲಿ ದ್ವಿಮುಖ ರಸ್ತೆ ನಿರ್ಮಾಣಕ್ಕಾಗಿ 2021ರಲ್ಲಿ 23 ಗುಂಟೆ ಜಾಗ ಬಳಸಿಕೊಳ್ಳಲಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆಗೂ ಮುನ್ನವೇ ಕಾಮಗಾರಿ ಮಾಡಲಾಗಿದೆ. ಬಳಿಕ ದರ ನಿಗದಿ ಮಾಡಲಾಗಿದೆ. ಅದರ ಪ್ರಕಾರ ಭೂ ಮಾಲೀಕರಿಗೆ ₹20 ಕೋಟಿ ಕೊಡಬೇಕು ಎಂದು ಆಗಿನ ಭೂಸ್ವಾಧೀನ ಅಧಿಕಾರಿ ನಿಗದಿ ಮಾಡಿದ್ದರು. ಇದು ಬಲು ದುಬಾರಿ ಎಂದು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತಕರಾರು ವ್ಯಕ್ತವಾಗಿದೆ.</p> <p>ಈ ಮಧ್ಯೆ, ಭೂ ಮಾಲೀಕ ಬಾಳಾಸಾಹೇಬ ಪಾಟೀಲ ಧಾರವಾಡ ಹೈಕೋರ್ಟ್ ಮೊರೆ ಹೋದರು. ಮುಂಚಿತವಾಗಿ ಅಧಿಕಾರಿಗಳೇ ಒಪ್ಪಿಕೊಂಡಿದ್ದರಿಂದ ₹20 ಕೋಟಿ ಪರಿಹಾರ ಕೊಡಬೇಕಾಗುತ್ತದೆ ಎಂದು ಹೈಕೋರ್ಟ್ ಪೀಠ ಆದೇಶ ನೀಡಿತ್ತು.</p> <p>‘ಪರಿಹಾರ ಕೊಡಲು ಅಷ್ಟು ಹಣವಿಲ್ಲ. ಭೂಮಿಯನ್ನು ಮರಳಿ ನೀಡುತ್ತೇವೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಇದಕ್ಕೆ ಭೂ ಮಾಲೀಕರೂ ಸಮ್ಮತಿ ಸೂಚಿಸಿದ್ದಾರೆ.</p> <p>ಮಂಗಳವಾರ (ಸೆ.17)ವರೆಗೆ ಹೈಕೋರ್ಟ್ ಸಮಯಾವಕಾಶ ನೀಡಿತ್ತು. ಆದರೂ ಪ್ರಕ್ರಿಯೆ ಪೂರ್ಣಗೊಳ್ಳದ್ದರಿಂದ ನ್ಯಾಯಮೂರ್ತಿಗಳು ಅಧಿಕಾರಿಗಳ ತರಾಟೆ ತೆಗೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೇ ರಸ್ತೆ ಕಾಮಗಾರಿ ಮಾಡಿದ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಹೈಕೋರ್ಟ್ ಧಾರವಾಡ ಪೀಠ ತರಾಟೆ ತೆಗೆದುಕೊಂಡಿದೆ.</p> <p>‘ಭೂ ಮಾಲೀಕರಿಗೆ ₹20 ಕೋಟಿ ಪರಿಹಾರ ಕೊಡಬೇಕು ಇಲ್ಲವೇ ಭೂಮಿ ಮರಳಿಸಬೇಕು. ರಸ್ತೆಯನ್ನು ಸಂಪೂರ್ಣ ಕಿತ್ತೊಗೆಯಬೇಕು, ಅದರ ನಷ್ಟವನ್ನೂ ಭರಿಸಿಕೊಡಬೇಕು. ತಪ್ಪು ಮಾಡಿದ ಅಧಿಕಾರಿಗೆ ಕೊನೆಯವರೆಗೂ ಬಡ್ತಿ ಸಿಗದಂತೆ ಸೇವಾಪುಸ್ತಕದಲ್ಲಿ ಬರೆಯಬೇಕು’ ಎಂದು ಕಟ್ಟಪ್ಪಣೆ ಮಾಡಿದೆ.</p> <p>ಮಂಗಳವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ‘ಈಗಿನ ಸರ್ಕಾರಗಳಿಗೆ ಸಭ್ಯತೆ ಉಳಿದಿಲ್ಲ. ಅಧಿಕಾರಿಗಳು ನ್ಯಾಯಾಲಯದ ಒಳ್ಳೆಯತನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಎಲ್ಲಿಯೂ ಇಷ್ಟು ಬೇಜವಾಬ್ದಾರಿ ಕಂಡಿಲ್ಲ. ಇಂಥ ಪ್ರಕರಣ ನೋಡಿಲ್ಲ’ ಎಂದರು.</p> <p>ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ನೋಡಿದ ನ್ಯಾಯಮೂರ್ತಿ, ‘ಖಾಸಗಿ ಭೂಮಿಯನ್ನು ದರೋಡೆ ಮಾಡಲು ಆಗುವುದಿಲ್ಲ. ಜನರಿಗೆ ತೊಂದರೆ ಆಗದಂತೆ ನಡೆದುಕೊಳ್ಳಬೇಕಲ್ಲವೇ? ನಾವೇನು ತಾಜ್ಮಹಲ್ ಕಟ್ಟಿಸಲು ಹೇಳುತ್ತಿದ್ದೇವೆಯೇ? ಸಂತ್ರಸ್ತರಿಗೆ ಪರಿಹಾರ ಕೊಡಿ ಅಷ್ಟೇ’ ಎಂದರು.</p> <p>‘ಒಂದೇ ದಿನದಲ್ಲಿ ಭೂಮಿ ಮರಳಿಸಬೇಕು. ನಿಮ್ಮ ವೈಯಕ್ತಿಕ ಖಾತೆಯಿಂದ ₹5 ಲಕ್ಷ ದಂಡ ಕೊಡಬೇಕು. ಅಲ್ಲದೇ ನಿಮಗೆ ಎಂದೂ ಬಡ್ತಿ ಸಿಗದಂತೆ ಸೇವಾಪುಸ್ತಕದಲ್ಲಿ ಸೇರಿಸಲಾಗುವುದು’ ಎಂದು ಅವರು ಎಚ್ಚರಿಸಿದರು.</p> <p>‘ದಂಡ ಹಾಗೂ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು. ನಾಲ್ಕು ದಿನ ಕಾಲಾವಕಾಶ ಕೊಡಬೇಕು’ ಎಂದು ಪಾಲಿಕೆ ಪರ ವಕೀಲ ಚೈತನ್ಯ ಮುನವಳ್ಳಿ ಮನವಿ ಮಾಡಿದರು.</p> <p>‘ಸ್ಮಾರ್ಟ್ಸಿಟಿ ಕಂಪನಿ ಕಾಮಗಾರಿ ಮಾಡಿದ್ದು, ಪಾಲಿಕೆಗೆ ಇನ್ನೂ ಪೂರ್ಣವಾಗಿ ಹಸ್ತಾಂತರ ಮಾಡಿಲ್ಲ. ಇದರಲ್ಲಿ ಸ್ಮಾರ್ಟ್ಸಿಟಿ ಅಧಿಕಾರಿಗಳದ್ದೂ ದೋಷವಿದೆ’ ಎಂದೂ ವಾದ ಮಾಡಿದರು.</p> <p>‘ಹಸ್ತಾಂತರ ಆಗಿಲ್ಲ ಎಂದಾದರೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗೊತ್ತುವಳಿ ಪಾಸ್ ಮಾಡಿ, ಪರಿಹಾರ ಹೇಗೆ ಘೋಷಿಸಿದಿರಿ’ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.</p> <p>‘ಸೋಮವಾರ (ಸೆ.23) ಒಳಗೆ ಭೂಮಿ ಮರಳಿಸಿದರೆ ದಂಡ– ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತೀರಿ. ಇಲ್ಲದಿದ್ದರೆ ಆಜ್ಞೆ ಪ್ರತಿ ಸಿದ್ಧವಾಗಿ ಇಟ್ಟಿರುತ್ತೇನೆ. ಅವತ್ತು ಸಹಿ ಮಾಡುತ್ತೇನೆ’ ಎಂದೂ ಕೊನೆಯ ಎಚ್ಚರಿಕೆ ನೀಡಿದರು.</p> <p>ಸಂತ್ರಸ್ತರ ಪರ ವಾದ ಮಾಡಿದ ವಕೀಲ ಆರ್.ಕೆ.ಪಾಟೀಲ, ‘ಇದು ಒಬ್ಬರ ಸಮಸ್ಯೆಯಲ್ಲ. ಈ ಅಧಿಕಾರಿಗಳು ಸಾರ್ವಜನಿಕರ ಕೋಟ್ಯಂತರ ಹಣ ಹಾಳು ಮಾಡಿದ್ದಾರೆ. ನ್ಯಾಯಾಲಯ ಅದನ್ನೂ ಪರಿಗಣಿಸಬೇಕು’ ಎಂದು ಕೋರಿದರು.</p> <p>ದ್ವಿಮುಖ ರಸ್ತೆಗೆ ಸ್ಮಾರ್ಟ್ಸಿಟಿಯಿಂದ ₹5.88 ಕೋಟಿ ವೆಚ್ಚ ಮಾಡಲಾಗಿದೆ. ಇದು ಬಂದಾದರೆ ನಗರದಿಂದ ಹಳೆ ಪಿಬಿ ರಸ್ತೆ, ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಲಿದೆ.</p> <h2><strong>ಪ್ರಕರಣ ಏನು?</strong></h2><p>ಬೆಳಗಾವಿ ನಗರದ ಎಸ್ಪಿಎಂ ಮಾರ್ಗದಲ್ಲಿ ದ್ವಿಮುಖ ರಸ್ತೆ ನಿರ್ಮಾಣಕ್ಕಾಗಿ 2021ರಲ್ಲಿ 23 ಗುಂಟೆ ಜಾಗ ಬಳಸಿಕೊಳ್ಳಲಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆಗೂ ಮುನ್ನವೇ ಕಾಮಗಾರಿ ಮಾಡಲಾಗಿದೆ. ಬಳಿಕ ದರ ನಿಗದಿ ಮಾಡಲಾಗಿದೆ. ಅದರ ಪ್ರಕಾರ ಭೂ ಮಾಲೀಕರಿಗೆ ₹20 ಕೋಟಿ ಕೊಡಬೇಕು ಎಂದು ಆಗಿನ ಭೂಸ್ವಾಧೀನ ಅಧಿಕಾರಿ ನಿಗದಿ ಮಾಡಿದ್ದರು. ಇದು ಬಲು ದುಬಾರಿ ಎಂದು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತಕರಾರು ವ್ಯಕ್ತವಾಗಿದೆ.</p> <p>ಈ ಮಧ್ಯೆ, ಭೂ ಮಾಲೀಕ ಬಾಳಾಸಾಹೇಬ ಪಾಟೀಲ ಧಾರವಾಡ ಹೈಕೋರ್ಟ್ ಮೊರೆ ಹೋದರು. ಮುಂಚಿತವಾಗಿ ಅಧಿಕಾರಿಗಳೇ ಒಪ್ಪಿಕೊಂಡಿದ್ದರಿಂದ ₹20 ಕೋಟಿ ಪರಿಹಾರ ಕೊಡಬೇಕಾಗುತ್ತದೆ ಎಂದು ಹೈಕೋರ್ಟ್ ಪೀಠ ಆದೇಶ ನೀಡಿತ್ತು.</p> <p>‘ಪರಿಹಾರ ಕೊಡಲು ಅಷ್ಟು ಹಣವಿಲ್ಲ. ಭೂಮಿಯನ್ನು ಮರಳಿ ನೀಡುತ್ತೇವೆ’ ಎಂದು ಪಾಲಿಕೆ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಇದಕ್ಕೆ ಭೂ ಮಾಲೀಕರೂ ಸಮ್ಮತಿ ಸೂಚಿಸಿದ್ದಾರೆ.</p> <p>ಮಂಗಳವಾರ (ಸೆ.17)ವರೆಗೆ ಹೈಕೋರ್ಟ್ ಸಮಯಾವಕಾಶ ನೀಡಿತ್ತು. ಆದರೂ ಪ್ರಕ್ರಿಯೆ ಪೂರ್ಣಗೊಳ್ಳದ್ದರಿಂದ ನ್ಯಾಯಮೂರ್ತಿಗಳು ಅಧಿಕಾರಿಗಳ ತರಾಟೆ ತೆಗೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>