ವಿಮರ್ಶೆ-ಸಂಶೋಧನೆ, ಜಾನಪದ ಮತ್ತು ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಬಾರಿ ಪ್ರಶಸ್ತಿ ನೀಡಲು ಟ್ರಸ್ಟ್ ತೀರ್ಮಾನಿಸಿದೆ. ಸಂಶೋಧಕ ಎಂ. ಚಿದಾನಂದಮೂರ್ತಿ (ವಿಮರ್ಶಾ-ಸಂಶೋಧನಾ), ರಾಯಬಾಗದ ಪ್ರೊ.ಜ್ಯೋತಿ ಹೊಸೂರ (ಜಾನಪದ) ಹಾಗೂ ರಾಘವೇಂದ್ರ ಜೋಶಿ (ಪತ್ರಿಕೋದ್ಯಮ) ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಳು ತಲಾ ₹ 50ಸಾವಿರ ನಗದು ಒಳಗೊಂಡಿವೆ.