<p><strong>ಘಟಪ್ರಭಾ (ಗೋಕಾಕ):</strong> ಸಕ್ಕರೆ ಕಾರ್ಖಾನೆಗೆ ಸಾಗಿಸಲು ಕಟಾವು ಮಾಡಲಾದ ಕಬ್ಬು ತುಂಬಿಕೊಂಡು ರಸ್ತೆ ಬದಿ ನಿಲುಗಡೆ ಮಾಡಲಾಗಿದ್ದ ಟ್ರ್ಯಾಕ್ಟರ್ವೊಂದರ ಟ್ರಾಲಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.</p>.<p>ಮೂಡಲತಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಬಾಳೇಶ ಸಿದ್ದ ನಂದಿ (51) ಮೃತರು. ವಡೇರಹಟ್ಟಿ-ಹುಣಶ್ಯಾಳಿ ಪಿಜಿ ರಸ್ತೆಯಲ್ಲಿ ಜ.2ರಂದು ರಾತ್ರಿ ಘಟನೆ ಸಂಭವಿಸಿದೆ.</p>.<p>ಟ್ರ್ಯಾಕ್ಟರ್ ಚಾಲಕ ತಲೆಮರೆಸಿಕೊಂಡಿದ್ದು, ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ.</p>.<p><strong>ಟ್ರ್ಯಾಕ್ಟರ್ ಗಾಲಿಗೆ ಸಿಲುಕಿ ಸಾವು</strong></p>.<p><strong>ಗೋಕಾಕ: </strong>ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ನಬಾಪೂರ ಗ್ರಾಮ ವ್ಯಾಪ್ತಿಯ ಶಿಲ್ತಿಭಾಂವಿ ಕ್ರಾಸ್ ಮತ್ತು ಖನಗಾಂವ ರಸ್ತೆಯಲ್ಲಿ ಜ.1ರಂದು ರಾತ್ರಿ ನಡೆದಿದೆ.</p>.<p>ನಬಾಪೂರ ಗ್ರಾಮದ ಶಿವನಗೌಡ ಶಂಕರಗೌಡ ಪಾಟೀಲ (40) ಮೃತರು.</p>.<p>ಚಾಲಕ, ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ಘನಸಾವಂಗಿ ತಾಲ್ಲೂಕಿನ ಅಂತರವಳಿ ಗ್ರಾಮದ ತಾಪೇಶ್ವರ ರತನ ಗಿರಿ ವಿರುದ್ಧ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಜಗಳ: ಕೊಲೆ ಯತ್ನ</strong></p>.<p>ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಜಮೀನಿನ ಒಡೆತನ ಮತ್ತು ಸ್ವಾಧೀನಕ್ಕೆ ಸಂಬಂಧಿಸಿ ನೆರೆಹೊರೆಯ ಕೃಷಿಕರ ನಡುವೆ ಉದ್ಭವಿಸಿದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದ ಕುರಿತು ಅಂಕಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಡಿ.31ರಂದು ಲಾಂಗ್ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಚನ್ನಯ್ಯ ಮಲ್ಲಯ್ಯ ಹಿರೇಮಠ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಮಹಾದೇವ ಸಿದ್ದಯ್ಯ ಹಿರೇಮಠ, ಕಾಶವ್ವ ಮಹಾದೇವ ಹಿರೇಮಠ, ಮಲ್ಲಯ್ಯ ಮಹಾದೇವ ಹಿರೇಮಠ ಮತ್ತು ಬಸಯ್ಯ ಮಹಾದೇವ ಹಿರೇಮಠ ಅವರ ಮೇಲೆ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಘಟಪ್ರಭಾ (ಗೋಕಾಕ):</strong> ಸಕ್ಕರೆ ಕಾರ್ಖಾನೆಗೆ ಸಾಗಿಸಲು ಕಟಾವು ಮಾಡಲಾದ ಕಬ್ಬು ತುಂಬಿಕೊಂಡು ರಸ್ತೆ ಬದಿ ನಿಲುಗಡೆ ಮಾಡಲಾಗಿದ್ದ ಟ್ರ್ಯಾಕ್ಟರ್ವೊಂದರ ಟ್ರಾಲಿಗೆ ಹಿಂದಿನಿಂದ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.</p>.<p>ಮೂಡಲತಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಬಾಳೇಶ ಸಿದ್ದ ನಂದಿ (51) ಮೃತರು. ವಡೇರಹಟ್ಟಿ-ಹುಣಶ್ಯಾಳಿ ಪಿಜಿ ರಸ್ತೆಯಲ್ಲಿ ಜ.2ರಂದು ರಾತ್ರಿ ಘಟನೆ ಸಂಭವಿಸಿದೆ.</p>.<p>ಟ್ರ್ಯಾಕ್ಟರ್ ಚಾಲಕ ತಲೆಮರೆಸಿಕೊಂಡಿದ್ದು, ನಿರ್ಲಕ್ಷ್ಯದ ಪ್ರಕರಣ ದಾಖಲಾಗಿದೆ.</p>.<p><strong>ಟ್ರ್ಯಾಕ್ಟರ್ ಗಾಲಿಗೆ ಸಿಲುಕಿ ಸಾವು</strong></p>.<p><strong>ಗೋಕಾಕ: </strong>ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಕ್ರಕ್ಕೆ ಸಿಲುಕಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ನಬಾಪೂರ ಗ್ರಾಮ ವ್ಯಾಪ್ತಿಯ ಶಿಲ್ತಿಭಾಂವಿ ಕ್ರಾಸ್ ಮತ್ತು ಖನಗಾಂವ ರಸ್ತೆಯಲ್ಲಿ ಜ.1ರಂದು ರಾತ್ರಿ ನಡೆದಿದೆ.</p>.<p>ನಬಾಪೂರ ಗ್ರಾಮದ ಶಿವನಗೌಡ ಶಂಕರಗೌಡ ಪಾಟೀಲ (40) ಮೃತರು.</p>.<p>ಚಾಲಕ, ಮಹಾರಾಷ್ಟ್ರದ ಜಾಲನಾ ಜಿಲ್ಲೆಯ ಘನಸಾವಂಗಿ ತಾಲ್ಲೂಕಿನ ಅಂತರವಳಿ ಗ್ರಾಮದ ತಾಪೇಶ್ವರ ರತನ ಗಿರಿ ವಿರುದ್ಧ ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಜಗಳ: ಕೊಲೆ ಯತ್ನ</strong></p>.<p>ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಜಮೀನಿನ ಒಡೆತನ ಮತ್ತು ಸ್ವಾಧೀನಕ್ಕೆ ಸಂಬಂಧಿಸಿ ನೆರೆಹೊರೆಯ ಕೃಷಿಕರ ನಡುವೆ ಉದ್ಭವಿಸಿದ್ದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೊಲೆ ಯತ್ನ ನಡೆದ ಕುರಿತು ಅಂಕಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಡಿ.31ರಂದು ಲಾಂಗ್ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಚನ್ನಯ್ಯ ಮಲ್ಲಯ್ಯ ಹಿರೇಮಠ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಗೋಕಾಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಮಹಾದೇವ ಸಿದ್ದಯ್ಯ ಹಿರೇಮಠ, ಕಾಶವ್ವ ಮಹಾದೇವ ಹಿರೇಮಠ, ಮಲ್ಲಯ್ಯ ಮಹಾದೇವ ಹಿರೇಮಠ ಮತ್ತು ಬಸಯ್ಯ ಮಹಾದೇವ ಹಿರೇಮಠ ಅವರ ಮೇಲೆ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>