ಸಂಕೇಶ್ವರ ಪಟ್ಟಣದ ರೈತ ಸಮುದಾಯವು ಕುಂಬಾರ ಗಲ್ಲಿ, ಹೆದ್ದೂರಶೆಟ್ಟಿ ಗಲ್ಲಿ, ಹರಗಾಪೂರ ಗಲ್ಲಿ, ಮಠ ಗಲ್ಲಿ, ನದಿ ಗಲ್ಲಿಗಳಲ್ಲಿ ವಾಸಿಸುತ್ತಿದೆ. ಜಾನುವಾರಗಳಿಗೆ ಸರ್ಕಾರವು ಗೋಶಾಲೆ ಪ್ರಾರಂಭಿಸಿಲ್ಲ. ಹೀಗಾಗಿ ಅವುಗಳನ್ನು ಮನೆಯಲ್ಲಿ ಬಿಟ್ಟು ಹೊರ ಬರಲು ಇಲ್ಲಿನ ಜನರು ಒಪ್ಪುತ್ತಿಲ್ಲ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ಬಂದಿರುವ ಎಸ್.ಡಿ.ಆರ್.ಎಫ್ ತಂಡಕ್ಕೆ ಏನು ಮಾಡಬೇಕೆಂಬುದು ತಿಳಿಯುತ್ತಿಲ್ಲ.