‘ತಿಂಗಳ ರಜೆ ಮುಗಿದ್ದರಿಂದ, ವೈದ್ಯರಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಾಖಲೆಗಳನ್ನು ಕಳುಹಿಸಿ ಮತ್ತೆ 15 ದಿನ ರಜೆ ಪಡೆದಿದ್ದ. ಚೇತರಿಸಿಕೊಂಡಿದ್ದ ಆತ, ಪತ್ನಿ–ಮಕ್ಕಳನ್ನು ಜೊತೆಯಲ್ಲಿ ಕರೆದೊಯ್ದಿದ್ದ. ಆದರೆ, ಅಲ್ಲಿ ಅವಕಾಶ ಸಿಗಲಿಲ್ಲವೆಂದು ವಾಪಸ್ ಊರಿಗೆ ಕರೆ ತಂದು ಬಿಟ್ಟು ಒಬ್ಬನೇ ತಿಂಗಳ ಹಿಂದೆ ಹೋಗಿದ್ದ. ಈ ನಡುವೆ ಬಿಎಸ್ಎಫ್ ಅಧಿಕಾರಿಗಳು ಅವರ ಅಣ್ಣನಿಗೆ ಭಾನುವಾರ ರಾತ್ರಿ ಕರೆ ಮಾಡಿ, ಸತ್ಯಪ್ಪ ನಾಲ್ವರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಮೃತದೇಹ ಕಳುಹಿಸಿಕೊಡಲಾಗುವುದು ಎಂದಿದ್ದಾರೆ’ ಎಂದು ಮಾಹಿತಿ ನೀಡಿದರು.