ಕೌಜಲಗಿ: ಸಮೀಪದ ಕಪರಟ್ಟಿ ಗ್ರಾಮದ ಕೆರೆ ಹತ್ತಿರ ಗೋಕಾಕನತ್ತ ಹೊರಟಿದ್ದ ಗೋಕಾಕ ಸಾರಿಗೆ ಘಟಕದ ಬಸ್ ರಸ್ತೆ ಪಕ್ಕಕ್ಕೆ ಉರುಳಿದೆ.
ಬಸ್ ಚಾಲಕನ ಪಕ್ಕದ ಟೈಯರ್ ಒಡೆದಿದ್ದರಿಂದ ನಿಯಂತ್ರಣ ತಪ್ಪಿ ಈ ಅನಾಹುತ ಸಂಭವಿಸಿದೆ. ಬಸ್ಸು ಸ್ವಲ್ಪ ಮುಂದಕ್ಕೆ ಸಾಗಿದ್ದರೆ ಸಮೀಪದಲ್ಲಿ ಕೆರೆ ಇದೆ. ಕೆರೆಯಲ್ಲಿ ನೀರಿಲ್ಲ, ಆದರೆ ಕಂದಕಕ್ಕೆ ಉರುಳಿದ್ದರೆ ಹೆಚ್ಚಿನ ಅನಾಹುತಗಳು ಆಗುವ ಸಾಧ್ಯತೆಗಳಿದ್ದವು ಎಂದು ಪ್ರಯಾಣಿಕರು ತಿಳಿಸಿದರು.