ಚನ್ನಮ್ಮನ ಕಿತ್ತೂರು: ಇಲ್ಲಿನ ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರ್ಥಿ ಒಕ್ಕೂಟ, ರೇಂಜರ್ಸ್ ಮತ್ತು ರೋವರ್ಸ್, ಯೂತ್ ರೆಡ್ ಕ್ರಾಸ್, ಎನ್.ಸಿ.ಸಿ ಘಟಕದ ಆಶ್ರಯದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.
ಪ್ರಾಚಾರ್ಯ ಜಿ.ಕೆ. ಭೂಮನಗೌಡರ ಮಾತನಾಡಿ, ‘ಭೂಮಿ ಸಕಲ ಜೀವಿಗಳಿಗೆ ಆಶ್ರಯತಾಣವಾಗಿದೆ. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯ ಮತ್ತು ಜೀವವೈವಿಧ್ಯ ನಾಶದ ಕುರಿತು ಜಾಗೃತಿ ಮೂಡಿಸಿ, ಭೂಮಿಯನ್ನು ರಕ್ಷಿಸಬೇಕಿದೆ’ ಎಂದರು.