ಈ ವೇಳೆ ಮಾತನಾಡಿದ ಉಪ ಮುಖ್ಯಮಂತ್ರಿ, ‘ಪಂಚಮಸಾಲಿ ಸಮಾಜದ ಋಣ ಭಾರ ನನ್ನ ಮೇಲಿದೆ. ವಿಧಾನಸಭೆಯ 3ನೇ ಮೆಟ್ಟಿಲು ಏರಲು ಸಮುದಾಯ ನನಗೆ ಕೊಡುಗೆ ನೀಡಿದೆ. ಈ ಋಣ ತೀರಿಸುವ ಕೆಲಸ ಮಾಡುತ್ತೇನೆ. ಎಲ್ಲ ಶಾಸಕರನ್ನೂ ಕರೆದುಕೊಂಡು ಬರುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅವರಿಗೆ ಮನವರಿಕೆ ಮಾಡಿಕೊಟ್ಟು ನ್ಯಾಯ ಕೊಡಿಸುತ್ತೇವೆ’ ಎಂದು ಭರವಸೆ ನೀಡಿದರು.