ಶಿಲ್ಪವನದಲ್ಲಿ 10 ಎಕರೆ ಪ್ರದೇಶದಲ್ಲಿ ರಾಯಣ್ಣನ ಸಮಗ್ರ ಜೀವನ ಚರಿತ್ರೆ ಹಾಗೂ ಕಿತ್ತೂರು ಚನ್ನಮ್ಮನ ಜೀವನದ ಘಟನೆಗಳನ್ನು ಸಾರುವ 1,600ಕ್ಕೂ ಹೆಚ್ಚಿನ ಮೂರ್ತಿಗಳು ವಿನ್ಯಾಸಗೊಳಿಸಲಾಗಿದೆ. ಹೋರಾಟ, ಕಿತ್ತೂರು ಕೋಟೆ, ದರ್ಬಾರ್ ಹಾಲ್, ಬ್ರಿಟಿಷರೊಂದಿಗಿನ ಯುದ್ಧದ ಸನ್ನಿವೇಶಗಳು, ಧಾರವಾಡ ಜೈಲುವಾಸ, ಕುಸ್ತಿ ಮೈದಾನ, ಸಂಪಗಾಂವಿ ಜೈಲಿನ ಮೇಲೆ ದಾಳಿ, ಡೋರಿ ಬೆಣಚಿ ಹಳ್ಳದಲ್ಲಿ ಮೋಸದಿಂದ ರಾಯಣ್ಣನ ಹಿಡಿದಿದ್ದು, ಆರು ಜನ ಸಹಚರರೊಂದಿಗೆ ಗಲ್ಲಿಗೇರಿದ ದೃಶ್ಯಗಳು ನೋಡುಗರ ಮೈಮನ ರೋಮಾಂಚನಗೊಳಿಸುವಂತಿವೆ.