ಪಟ್ಟಣದ ಬಸವ ವೃತ್ತ, ಕೋರ್ಟ್ ಸಂಕೀರ್ಣದ ಎದುರು, ಕೇಂದ್ರ ಬಸ್ ನಿಲ್ದಾಣ, ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಬಳಿ ಮಕ್ಕಳು ಗುಂಪು ಗುಂಪಾಗಿ ಬೇಡುವುದು ಸಾಮಾನ್ಯವಾಗಿದೆ. ಚಿಕ್ಕ ವಯಸ್ಸಿನವರಿಂದ ಹದಿಹರೆಯದವರೆಗಿನವರು ಭಿಕ್ಷೆ ಬೇಡುತ್ತಿದ್ದಾರೆ. ಓದು–ಬರಹ ಕಲಿಯಬೇಕಾದ ಕೈಗಳಲ್ಲಿ ಪ್ಲೇಟ್ ಹಿಡಿದು, ಅದರಲ್ಲಿ ಯಾವುದಾದರೊಂದು ದೇವರ ಮೂರ್ತಿ ಇಟ್ಟುಕೊಂಡು ಹಣಕ್ಕಾಗಿ ದುಂಬಾಲು ಬೀಳುವುದು ಕಂಡು ಬರುತ್ತಿದೆ.