ಸುರೇಶ ಪಾಟೀಲ ಎನ್ನುವವರ ಕೊಲೆಯಿಂದಾಗಿ, ಶನಿವಾರ ತಡರಾತ್ರಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಬಣವಿಗಳಗಿ ಹಚ್ಚಿದ ಬೆಂಕಿ ಭಾನುವಾರ ಬೆಳಿಗ್ಗೆ ಕೂಡ ಹೊಗೆಯಾಡುತ್ತಿತ್ತು. 40ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾದರು. ಮೂರು ಅಗ್ನಿಶಾಮಕ ವಾಹನಗಳಲ್ಲಿ ನೀರು ತುಂಬಿತಂದು ಬೆಂಕಿಗೆ ಹಾಕಲಾಯಿತು.