‘ವಚನ, ದಾಸ, ನಾಟಕ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಪ್ರಕಾರಗಳ ಸಮಾವೇಶ ಆಯೋಜಿಸಲಾಗುವುದು. ಪರಿಷತ್ ಪ್ರಕಟಿಸಿರುವ ಅಪರೂಪದ ಮೌಲಿಕ ಗ್ರಂಥಗಳನ್ನು (ಹಸ್ತಪ್ರತಿ, ಸಂಶೋಧನೆ, ಹಳೆಗನ್ನಡ, ಆಧುನಿಕ ಸಾಹಿತ್ಯ) ಮರುಮುದ್ರಣ ಮಾಡುತ್ತೇನೆ. ಕನ್ನಡ, ರೈತ ಹಾಗೂ ಜನಪರ ಚಳವಳಿ, ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮ- ಕನ್ನಡ ಸಂಘಗಳ ‘ಜನಸಾಮಾನ್ಯ’ ಸಮಾವೇಶ ನಡೆಸುತ್ತೇನೆ’ ಎಂದು ತಿಳಿಸಿದರು.