<p><strong>ರಾಮದುರ್ಗ</strong>: ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕುತಂತ್ರದಿಂದ ಅಧಿಕಾರಕ್ಕೆ ಬಂದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಒಂದು ಕುಟುಂಬದ ವಿರುದ್ಧ ಸೆಣಸಾಡಲು ಈ ಸಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಬ್ಬು ಬೆಳೆಗಾರರ ಪೆನೆಲ್ನ ಪಿ.ಎಫ್.ಪಾಟೀಲ ಹೇಳಿದರು.</p>.<p>ಇಲ್ಲಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ಸೇರಿದ್ದ ಮಹಾದೇವಪ್ಪ ಯಾದವಾಡ ಪೆನೆಲ್ ವಿರುದ್ಧ ಬಣದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದಲೂ ಯಾದವಾಡ ಕುಟುಂಬದವರು ಕಾರ್ಖಾನೆಯ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ಕಬ್ಬು ಬೆಳೆಗಾರರು, ಷೇರುದಾರರು ಕಣ್ಣಿಗೆ ಕಾಣುವುದಿಲ್ಲ. ಅವರಿಗೆ ಪೈಪೋಟಿ ನೀಡಲು ಪಕ್ಕದ ತಾಲ್ಲೂಕಿನ ಕಾಣದ ಕೈಗಳು ಬೆಂಬಲ ಸೂಚಿಸಿವೆ. ಅವುಗಳ ಲಾಭ ಪಡೆದು ಪರ್ಯಾಯ ಪೆನೆಲ್ ಮೂಲಕ ಕಾರ್ಖಾನೆಯ ಆಡಳಿತ ಹಿಡಿದಿಟ್ಟುಕೊಳ್ಳಲು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.</p>.<p>ಮಾಜಿ ಶಾಸಕ ಬಿ.ಬಿ.ಹಿರೇರಡ್ಡಿ ಅವರು ಫೋಟೊ ಬಳಸಿಕೊಂಡು ಪ್ರತ್ಯೇಕ ಪೆನೆಲ್ನಲ್ಲಿ ಚುನಾವಣೆ ಎದುರಿಬೇಕಿದೆ ಎಂದು ಸಾಲಾಪೂರದ ಲಕ್ಷ್ಮಣ ಕನಸಗೇರಿ ಹೇಳಿದರು.</p>.<p>‘ಕಳೆದ ಚುನಾವಣೆಯಲ್ಲಿ ಷೇರುದಾರರ ಮತದಾನ ರದ್ದು ಪಡಿಸುವ ಮೂಲಕ ಅಧಿಕಾರಕ್ಕೆ ಬಂದಿರುವ ಯಾದವಾಡ ಕುಟುಂಬ ಎಲ್ಲ ಕಸರತ್ತುಗಳನ್ನು ಮಾಡಲಿದೆ. ಷೇರುದಾರರು ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದು ಚುನಾವಣೆಯಲ್ಲಿ ಮತದಾನಕ್ಕೆ ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಮೇಶ ದೇಶಪಾಂಡೆ ಕರೆ ನೀಡಿದರು.</p>.<p>ಸುಮಾರು 19 ಸಾವಿರ ಷೇರುದಾರರಲ್ಲಿ ಕೇವಲ 4 ಸಾವಿರ ಷೇರುದಾರರಿಗೆ ಮತದಾನ ಹಕ್ಕು ನೀಡಿ ಗೆದ್ದಿರುವ ಯಾದವಾಡ ಕುಟುಂಬಕ್ಕೆ ತಕ್ಕ ಪಾಠ ಕಲಿಸಲು ಎಲ್ಲ ಷೇರುದಾರರು ಪಣ ತೊಡಬೇಕು. ಸಕ್ಕರೆ ಕಾರ್ಖಾನೆಯಿಂದ ಯಾದವಾಡ ಕುಟುಂಬ ತೊಲಗಿಸಿ ಆಂದೋಲನ ಮಾಡುವ ಮೂಲಕ ಷೇರುದಾರರು ಮೋಸ ಮಾಡಿದವರಿಗೆ ತಕ್ಕ ಉತ್ತರ ನೀಡಲು ಮುಂದಾಗಬೇಕು ಎಂದು ಬಿ.ಆರ್.ದೊಡಮನಿ (ರಡ್ಡಿ) ಹೇಳಿದರು.</p>.<p>ಖಾನಪೇಟೆಯ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರಾಮದುರ್ಗ, ಬೈಲಹೊಂಗಲ, ಕಿತ್ತೂರು, ಸವದತ್ತಿ ಭಾಗದ ರೈತರೂ ಷೇರುದಾರರಿದ್ದಾರೆ. ಆಯಾ ಭಾಗಕ್ಕೂ ಒಂದೊಂದು ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಿಗೆ ಅವಕಾಶ ನೀಡಿ ಒಕ್ಕೂರಲಿನ ಒಗ್ಗಟ್ಟು ಪ್ರದರ್ಶಿಸಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.</p>.<p>ಪಂಚಮಸಾಲಿ ಸಮಾಜದ ಮುಖಂಡ ಸಿ.ಬಿ.ಪಾಟೀಲ, ವೈ.ಎಚ್.ಪಾಟೀಲ, ಲಚ್ಚಪ್ಪ ಕಾಮಣ್ಣವರ, ಬಸವರಾಜ ಹಿರೇರಡ್ಡಿ, ಪರೂತಗೌಡ ಪಾಟೀಲ, ಕೆ.ವಿ. ಪಾಟೀಲ, ಮೆಟಗುಡ್ಡ, ಕಲ್ಲಣ್ಣ ವಜ್ರಮಟ್ಟಿ ಸೇರಿದಂತೆ ಸವದತ್ತಿ, ಕಿತ್ತೂರು, ಬೈಲಹೊಂಗಲ ಭಾಗದ ರೈತರು ಸಭೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮದುರ್ಗ</strong>: ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕುತಂತ್ರದಿಂದ ಅಧಿಕಾರಕ್ಕೆ ಬಂದು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಒಂದು ಕುಟುಂಬದ ವಿರುದ್ಧ ಸೆಣಸಾಡಲು ಈ ಸಾರಿಯ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕಬ್ಬು ಬೆಳೆಗಾರರ ಪೆನೆಲ್ನ ಪಿ.ಎಫ್.ಪಾಟೀಲ ಹೇಳಿದರು.</p>.<p>ಇಲ್ಲಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಭಾನುವಾರ ಸೇರಿದ್ದ ಮಹಾದೇವಪ್ಪ ಯಾದವಾಡ ಪೆನೆಲ್ ವಿರುದ್ಧ ಬಣದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದಲೂ ಯಾದವಾಡ ಕುಟುಂಬದವರು ಕಾರ್ಖಾನೆಯ ಆಡಳಿತ ನಡೆಸುತ್ತಿದ್ದಾರೆ. ಅವರಿಗೆ ಕಬ್ಬು ಬೆಳೆಗಾರರು, ಷೇರುದಾರರು ಕಣ್ಣಿಗೆ ಕಾಣುವುದಿಲ್ಲ. ಅವರಿಗೆ ಪೈಪೋಟಿ ನೀಡಲು ಪಕ್ಕದ ತಾಲ್ಲೂಕಿನ ಕಾಣದ ಕೈಗಳು ಬೆಂಬಲ ಸೂಚಿಸಿವೆ. ಅವುಗಳ ಲಾಭ ಪಡೆದು ಪರ್ಯಾಯ ಪೆನೆಲ್ ಮೂಲಕ ಕಾರ್ಖಾನೆಯ ಆಡಳಿತ ಹಿಡಿದಿಟ್ಟುಕೊಳ್ಳಲು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.</p>.<p>ಮಾಜಿ ಶಾಸಕ ಬಿ.ಬಿ.ಹಿರೇರಡ್ಡಿ ಅವರು ಫೋಟೊ ಬಳಸಿಕೊಂಡು ಪ್ರತ್ಯೇಕ ಪೆನೆಲ್ನಲ್ಲಿ ಚುನಾವಣೆ ಎದುರಿಬೇಕಿದೆ ಎಂದು ಸಾಲಾಪೂರದ ಲಕ್ಷ್ಮಣ ಕನಸಗೇರಿ ಹೇಳಿದರು.</p>.<p>‘ಕಳೆದ ಚುನಾವಣೆಯಲ್ಲಿ ಷೇರುದಾರರ ಮತದಾನ ರದ್ದು ಪಡಿಸುವ ಮೂಲಕ ಅಧಿಕಾರಕ್ಕೆ ಬಂದಿರುವ ಯಾದವಾಡ ಕುಟುಂಬ ಎಲ್ಲ ಕಸರತ್ತುಗಳನ್ನು ಮಾಡಲಿದೆ. ಷೇರುದಾರರು ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದು ಚುನಾವಣೆಯಲ್ಲಿ ಮತದಾನಕ್ಕೆ ಮುಂದಾಗಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಮೇಶ ದೇಶಪಾಂಡೆ ಕರೆ ನೀಡಿದರು.</p>.<p>ಸುಮಾರು 19 ಸಾವಿರ ಷೇರುದಾರರಲ್ಲಿ ಕೇವಲ 4 ಸಾವಿರ ಷೇರುದಾರರಿಗೆ ಮತದಾನ ಹಕ್ಕು ನೀಡಿ ಗೆದ್ದಿರುವ ಯಾದವಾಡ ಕುಟುಂಬಕ್ಕೆ ತಕ್ಕ ಪಾಠ ಕಲಿಸಲು ಎಲ್ಲ ಷೇರುದಾರರು ಪಣ ತೊಡಬೇಕು. ಸಕ್ಕರೆ ಕಾರ್ಖಾನೆಯಿಂದ ಯಾದವಾಡ ಕುಟುಂಬ ತೊಲಗಿಸಿ ಆಂದೋಲನ ಮಾಡುವ ಮೂಲಕ ಷೇರುದಾರರು ಮೋಸ ಮಾಡಿದವರಿಗೆ ತಕ್ಕ ಉತ್ತರ ನೀಡಲು ಮುಂದಾಗಬೇಕು ಎಂದು ಬಿ.ಆರ್.ದೊಡಮನಿ (ರಡ್ಡಿ) ಹೇಳಿದರು.</p>.<p>ಖಾನಪೇಟೆಯ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ರಾಮದುರ್ಗ, ಬೈಲಹೊಂಗಲ, ಕಿತ್ತೂರು, ಸವದತ್ತಿ ಭಾಗದ ರೈತರೂ ಷೇರುದಾರರಿದ್ದಾರೆ. ಆಯಾ ಭಾಗಕ್ಕೂ ಒಂದೊಂದು ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಿಗೆ ಅವಕಾಶ ನೀಡಿ ಒಕ್ಕೂರಲಿನ ಒಗ್ಗಟ್ಟು ಪ್ರದರ್ಶಿಸಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.</p>.<p>ಪಂಚಮಸಾಲಿ ಸಮಾಜದ ಮುಖಂಡ ಸಿ.ಬಿ.ಪಾಟೀಲ, ವೈ.ಎಚ್.ಪಾಟೀಲ, ಲಚ್ಚಪ್ಪ ಕಾಮಣ್ಣವರ, ಬಸವರಾಜ ಹಿರೇರಡ್ಡಿ, ಪರೂತಗೌಡ ಪಾಟೀಲ, ಕೆ.ವಿ. ಪಾಟೀಲ, ಮೆಟಗುಡ್ಡ, ಕಲ್ಲಣ್ಣ ವಜ್ರಮಟ್ಟಿ ಸೇರಿದಂತೆ ಸವದತ್ತಿ, ಕಿತ್ತೂರು, ಬೈಲಹೊಂಗಲ ಭಾಗದ ರೈತರು ಸಭೆಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>