<p>ಬೆಳಗಾವಿ: ಇದೇ ಪ್ರಥಮ ಬಾರಿಗೆ ರಾಜಕೀಯ ಪಕ್ಷಗಳ ಸ್ಪರ್ಧೆಯಿಂದಾಗಿ ಗಮನಸೆಳೆದಿರುವ ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯ ಫಲಿತಾಂಶ ಸೋಮವಾರ (ಸೆ.6) ಪ್ರಕಟಗೊಳ್ಳಲಿದೆ.</p>.<p>ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಬಿ.ಕೆ. ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.</p>.<p>ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಬಳಸಿರುವುದರಿಂದಾಗಿ ಮಧ್ಯಾಹ್ನಕ್ಕೂ ಮುನ್ನವೇ ಸಂಪೂರ್ಣ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.</p>.<p class="Subhead"><strong>ಪಕ್ಷಕ್ಕೋ, ಪಕ್ಷೇತರರಿಗೋ?</strong></p>.<p>ಇಲ್ಲಿ 58 ವಾರ್ಡ್ಗಳಿದ್ದು, 415 ಮತಗಟ್ಟೆಗಳಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 50.42ರಷ್ಟು ಮತದಾನವಾಗಿತ್ತು. 385 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾರರು ತಮ್ಮ ಪ್ರತಿನಿಧಿಯನ್ನಾಗಿ ಯಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಇದುವರೆಗೆ ಭಾಷೆ ಆಧಾರದ ಮೇಲೆ ನಡೆಯುತ್ತಿದ್ದ ಚುನಾವಣೆಯು ಈ ಬಾರಿ ರಾಜಕೀಯ ಪಕ್ಷಗಳ ಚಿಹ್ನೆಗಳ ಆಧಾರದ ಮೇಲೆ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಚುಣಾವಣೆಯಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಅದರಲ್ಲೂ ಆಡಳಿತ ಪಕ್ಷವಾದ ಬಿಜೆಪಿಯ ಮುಖಂಡರ ದಂಡು ಪ್ರಚಾರ ಕಣಕ್ಕಿಳಿದಿತ್ತು. ಹೀಗಾಗಿ, ಫಲಿತಾಂಶವು ಜನರಲ್ಲಿ ಕುತೂಹಲ ಮೂಡಿಸಿದೆ.</p>.<p>ಅಧಿಕಾರದ ಗದ್ದುಗೆಯು ರಾಜಕೀಯ ಪಕ್ಷದವರಿಗೆ ಸಿಗುವುದೇ, ಪಕ್ಷೇತರರ ಕೈಮೇಲಾಗುವುದೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಮತದಾರರು ನೀಡಿರುವ ಉತ್ತರವು ಸೋಮವಾರ ಬಹಿರಂಗಗೊಳ್ಳಲಿದೆ.</p>.<p class="Subhead"><strong>12 ಕೊಠಡಿಗಳಲ್ಲಿ ವ್ಯವಸ್ಥೆ</strong></p>.<p>ಮತ ಏಣಿಕೆಗಾಗಿ 12 ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ ಎರಡು ಟೇಬಲ್ಗಳನ್ನು ಇಡಲಾಗಿದೆ. ಒಂದು ಅಂಚೆ ಮತಪತ್ರದ ಎಣಿಕೆ ನಡೆಯಲಿದೆ. ಎಲ್ಲವೂ ಸೇರಿ 24 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದ್ದು, ಏಕಕಾಲದಲ್ಲಿ 24 ವಾರ್ಡ್ಗಳಲ್ಲಿನ ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿಯಾಗಿ 12 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಕೊಠಡಿಗೆ ಎಣಿಕೆ ಮೇಲ್ವಿಚಾರಕರಾಗಿ ಮೂವರು ಹಾಗೂ ಎಣಿಕೆ ಸಹಾಯಕರಾಗಿ ಆರು ಮಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಅಭ್ಯರ್ಥಿಗೆ ಇಬ್ಬರು ಕೌಂಟಿಂಗ್ ಏಜೆಂಟರಿಗೆ ಅವಕಾಶ ಕೊಡಲಾಗಿದೆ.</p>.<p>ಪ್ರತಿ ಚುಣಾವಣಾಧಿಕಾರಿಗೆ ಸಂಬಂಧಿಸಿದ ಐದು ವಾರ್ಡ್ಗಳಂತೆ, ಅಭ್ಯರ್ಥಿಗಳು ಹಾಗೂ ಏಜೆಂಟರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಯಾವ ವಾರ್ಡ್ನ ಮತ ಎಣಿಕೆ ಪ್ರಾರಂಭವಾಗುತ್ತದೆಯೋ ಆ ವಾರ್ಡ್ನ ಅಭ್ಯರ್ಥಿಗಳು, ಏಜೆಂಟರು ಮತ್ತು ಕೌಂಟಿಂಗ್ ಏಜೆಂಟರಿಗೆ ಮತ ಎಣಿಕೆ ಕೊಠಡಿಗೆ ಕಳುಹಿಸಿಕೊಡಲಾಗುವುದು. ವಿಜೇತರಿಗೆ ಸಂಬಂಧಿಸಿದ ಚುನಾವಣಾಧಿಕಾರಿ ಕೊಠಡಿಯಲ್ಲಿ ಪ್ರಮಾಣಪತ್ರವನ್ನು ವಿತರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.</p>.<p>ಮತ ಎಣಿಕೆ ಹಿನ್ನೆಲೆಯಲ್ಲಿ ಬೆಳಗಾವಿ ತಾಲ್ಲೂಕಿನಲ್ಲಿ ಅಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐವರಿಗಿಂತ ಹೆಚ್ಚಿನವರು ಗುಂಪು ಸೇರುವುದು, ಮೆರವಣಿಗೆ, ಸಭೆ–ಸಮಾರಂಭ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.</p>.<p>ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.</p>.<p class="Subhead">ಅಂಕಿ ಅಂಶ</p>.<p><strong>58:</strong>ವಾರ್ಡ್</p>.<p><strong>385:</strong> ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು</p>.<p><strong>55:</strong> ಬಿಜೆಪಿ</p>.<p><strong>45:</strong> ಕಾಂಗ್ರೆಸ್</p>.<p><strong>27:</strong> ಆಮ್ ಆದ್ಮಿ ಪಕ್ಷ</p>.<p><strong>11: </strong>ಜೆಡಿಎಸ್</p>.<p><strong>7:</strong> ಎಐಎಂಐಎಂ ಪಕ್ಷ</p>.<p><strong>1:</strong> ಉತ್ತಮ ಪ್ರಜಾಕೀಯ ಪಕ್ಷ</p>.<p><strong>1: </strong>ಎಸ್ಡಿಪಿಐ ಪಕ್ಷ</p>.<p><strong>238:</strong> ಪಕ್ಷೇತರರು</p>.<p><strong>ಶೇ 50.42:</strong> ನಡೆದಿರುವ ಮತದಾನ</p>.<p class="Subhead"><strong>ಮುಖ್ಯಾಂಶಗಳು</strong></p>.<p>ಬಿ.ಕೆ. ಮಾಡೆಲ್ ಶಾಲೆಯಲ್ಲಿ ಮತ ಎಣಿಕೆ</p>.<p>ಬೆಳಗಾವಿ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ</p>.<p>ಮೆರವಣಿಗೆಗೆ ಅವಕಾಶವಿಲ್ಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ಇದೇ ಪ್ರಥಮ ಬಾರಿಗೆ ರಾಜಕೀಯ ಪಕ್ಷಗಳ ಸ್ಪರ್ಧೆಯಿಂದಾಗಿ ಗಮನಸೆಳೆದಿರುವ ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯ ಫಲಿತಾಂಶ ಸೋಮವಾರ (ಸೆ.6) ಪ್ರಕಟಗೊಳ್ಳಲಿದೆ.</p>.<p>ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಬಿ.ಕೆ. ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.</p>.<p>ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಬಳಸಿರುವುದರಿಂದಾಗಿ ಮಧ್ಯಾಹ್ನಕ್ಕೂ ಮುನ್ನವೇ ಸಂಪೂರ್ಣ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.</p>.<p class="Subhead"><strong>ಪಕ್ಷಕ್ಕೋ, ಪಕ್ಷೇತರರಿಗೋ?</strong></p>.<p>ಇಲ್ಲಿ 58 ವಾರ್ಡ್ಗಳಿದ್ದು, 415 ಮತಗಟ್ಟೆಗಳಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 50.42ರಷ್ಟು ಮತದಾನವಾಗಿತ್ತು. 385 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾರರು ತಮ್ಮ ಪ್ರತಿನಿಧಿಯನ್ನಾಗಿ ಯಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಇದುವರೆಗೆ ಭಾಷೆ ಆಧಾರದ ಮೇಲೆ ನಡೆಯುತ್ತಿದ್ದ ಚುನಾವಣೆಯು ಈ ಬಾರಿ ರಾಜಕೀಯ ಪಕ್ಷಗಳ ಚಿಹ್ನೆಗಳ ಆಧಾರದ ಮೇಲೆ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರು ಚುಣಾವಣೆಯಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಅದರಲ್ಲೂ ಆಡಳಿತ ಪಕ್ಷವಾದ ಬಿಜೆಪಿಯ ಮುಖಂಡರ ದಂಡು ಪ್ರಚಾರ ಕಣಕ್ಕಿಳಿದಿತ್ತು. ಹೀಗಾಗಿ, ಫಲಿತಾಂಶವು ಜನರಲ್ಲಿ ಕುತೂಹಲ ಮೂಡಿಸಿದೆ.</p>.<p>ಅಧಿಕಾರದ ಗದ್ದುಗೆಯು ರಾಜಕೀಯ ಪಕ್ಷದವರಿಗೆ ಸಿಗುವುದೇ, ಪಕ್ಷೇತರರ ಕೈಮೇಲಾಗುವುದೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಮತದಾರರು ನೀಡಿರುವ ಉತ್ತರವು ಸೋಮವಾರ ಬಹಿರಂಗಗೊಳ್ಳಲಿದೆ.</p>.<p class="Subhead"><strong>12 ಕೊಠಡಿಗಳಲ್ಲಿ ವ್ಯವಸ್ಥೆ</strong></p>.<p>ಮತ ಏಣಿಕೆಗಾಗಿ 12 ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ ಎರಡು ಟೇಬಲ್ಗಳನ್ನು ಇಡಲಾಗಿದೆ. ಒಂದು ಅಂಚೆ ಮತಪತ್ರದ ಎಣಿಕೆ ನಡೆಯಲಿದೆ. ಎಲ್ಲವೂ ಸೇರಿ 24 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದ್ದು, ಏಕಕಾಲದಲ್ಲಿ 24 ವಾರ್ಡ್ಗಳಲ್ಲಿನ ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿಯಾಗಿ 12 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಕೊಠಡಿಗೆ ಎಣಿಕೆ ಮೇಲ್ವಿಚಾರಕರಾಗಿ ಮೂವರು ಹಾಗೂ ಎಣಿಕೆ ಸಹಾಯಕರಾಗಿ ಆರು ಮಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಅಭ್ಯರ್ಥಿಗೆ ಇಬ್ಬರು ಕೌಂಟಿಂಗ್ ಏಜೆಂಟರಿಗೆ ಅವಕಾಶ ಕೊಡಲಾಗಿದೆ.</p>.<p>ಪ್ರತಿ ಚುಣಾವಣಾಧಿಕಾರಿಗೆ ಸಂಬಂಧಿಸಿದ ಐದು ವಾರ್ಡ್ಗಳಂತೆ, ಅಭ್ಯರ್ಥಿಗಳು ಹಾಗೂ ಏಜೆಂಟರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಯಾವ ವಾರ್ಡ್ನ ಮತ ಎಣಿಕೆ ಪ್ರಾರಂಭವಾಗುತ್ತದೆಯೋ ಆ ವಾರ್ಡ್ನ ಅಭ್ಯರ್ಥಿಗಳು, ಏಜೆಂಟರು ಮತ್ತು ಕೌಂಟಿಂಗ್ ಏಜೆಂಟರಿಗೆ ಮತ ಎಣಿಕೆ ಕೊಠಡಿಗೆ ಕಳುಹಿಸಿಕೊಡಲಾಗುವುದು. ವಿಜೇತರಿಗೆ ಸಂಬಂಧಿಸಿದ ಚುನಾವಣಾಧಿಕಾರಿ ಕೊಠಡಿಯಲ್ಲಿ ಪ್ರಮಾಣಪತ್ರವನ್ನು ವಿತರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.</p>.<p>ಮತ ಎಣಿಕೆ ಹಿನ್ನೆಲೆಯಲ್ಲಿ ಬೆಳಗಾವಿ ತಾಲ್ಲೂಕಿನಲ್ಲಿ ಅಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐವರಿಗಿಂತ ಹೆಚ್ಚಿನವರು ಗುಂಪು ಸೇರುವುದು, ಮೆರವಣಿಗೆ, ಸಭೆ–ಸಮಾರಂಭ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.</p>.<p>ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.</p>.<p class="Subhead">ಅಂಕಿ ಅಂಶ</p>.<p><strong>58:</strong>ವಾರ್ಡ್</p>.<p><strong>385:</strong> ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು</p>.<p><strong>55:</strong> ಬಿಜೆಪಿ</p>.<p><strong>45:</strong> ಕಾಂಗ್ರೆಸ್</p>.<p><strong>27:</strong> ಆಮ್ ಆದ್ಮಿ ಪಕ್ಷ</p>.<p><strong>11: </strong>ಜೆಡಿಎಸ್</p>.<p><strong>7:</strong> ಎಐಎಂಐಎಂ ಪಕ್ಷ</p>.<p><strong>1:</strong> ಉತ್ತಮ ಪ್ರಜಾಕೀಯ ಪಕ್ಷ</p>.<p><strong>1: </strong>ಎಸ್ಡಿಪಿಐ ಪಕ್ಷ</p>.<p><strong>238:</strong> ಪಕ್ಷೇತರರು</p>.<p><strong>ಶೇ 50.42:</strong> ನಡೆದಿರುವ ಮತದಾನ</p>.<p class="Subhead"><strong>ಮುಖ್ಯಾಂಶಗಳು</strong></p>.<p>ಬಿ.ಕೆ. ಮಾಡೆಲ್ ಶಾಲೆಯಲ್ಲಿ ಮತ ಎಣಿಕೆ</p>.<p>ಬೆಳಗಾವಿ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ</p>.<p>ಮೆರವಣಿಗೆಗೆ ಅವಕಾಶವಿಲ್ಲ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>