‘7 ಎಕರೆ ಜಮೀನಿದ್ದು, ಅದರಲ್ಲಿ 5 ಎಕರೆಯಲ್ಲಿ ಚೆಂಡು ಹೂ ಹಾಗೂ 2 ಎಕರೆಯಲ್ಲಿ ಹೂಕೋಸು ಬೆಳೆದಿದ್ದೆ. ₹ 3 ಲಕ್ಷ ವೆಚ್ಚವಾಗಿದೆ. ಯೋಗ್ಯ ಬೆಲೆ ಸಿಕ್ಕರೆ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ ಎನ್ನುವಷ್ಟರಲ್ಲಿ ಸರ್ಕಾರ ಭಾಗಶಃ ಲಾಕ್ಡೌನ್ ಜಾರಿ ಮಾಡಿದೆ. ಇದರಿಂದಾಗಿ ಅಪಾರ ಹಾನಿ ಸಂಭವಿಸಿದೆ. ಮಾರುಕಟ್ಟೆಯುಲ್ಲಿ ಬೇಡಿಕೆ ಕುಸಿದಿರುವುದರಿಂದಾಗಿ, ಹೂ ಹಾಗೂ ಹೂಕೋಸನ್ನು ಮಾರುಕಟ್ಟೆಗೆ ತರಲು ಮಾಡಿರುವ ಖರ್ಚು ಕೂಡ ಸಿಗುತ್ತಿಲ್ಲ’ ಎಂದು ರಾಯಪ್ಪ ಅಳಲು ತೋಡಿಕೊಂಡರು.