‘ನಾನು ಬಿ.ಕಾಂ ಓದುತ್ತಿದ್ದೆ. ನಿತ್ಯ ಕಾಲೇಜಿಗೆ ಹೋಗುವಾಗ ರೇಗಿಸುತ್ತಿದ್ದ. ನಿಮ್ಮ ಮಗಳನ್ನು ಮದುವೆ ಮಾಡಿಕೊಡುವಂತೆ ನನ್ನ ತಾಯಿಗೂ ಬೆದರಿಕೆ ಹಾಕಿದ್ದ. ಮೂರು ವರ್ಷಗಳ ಹಿಂದೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆಗ ಪೊಲೀಸರು ಎಚ್ಚರಿಕೆ ನೀಡಿದ್ದರಿಂದ ಸುಮ್ಮನಾಗಿದ್ದ ತಿಪ್ಪಣ್ಣ, ಇತ್ತೀಚೆಗೆ ಮತ್ತೆ ಕಿರಿಕಿರಿ ನೀಡಲು ಮುಂದಾಗಿದ್ದ’ ಎಂದು ದೂರಿದ್ದಾರೆ.