ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಬೆಂಕಿ ಅವಘಡ: ಇಬ್ಬರ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಸಂಭವಿಸಿದ್ದ ಅವಘಡ
Published 29 ಜನವರಿ 2024, 10:07 IST
Last Updated 29 ಜನವರಿ 2024, 10:07 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬಸವನ ಗಲ್ಲಿಯ ಮನೆಯಲ್ಲಿ ಭಾನುವಾರ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಬೆಂಕಿ ಹೊತ್ತಿ ಗಾಯಗೊಂಡಿದ್ದ ಐವರ ಪೈಕಿ, ಇಬ್ಬರು ಸೋಮವಾರ ಅಸುನೀಗಿದರು.

ಉಡುಪಿ ಮೂಲದ ಕಾಮಾಕ್ಷಿ ಭಟ್‌ (80) ಹಾಗೂ ಹೇಮಂತ್‌ ಭಟ್‌ (27) ಮೃತಪಟ್ಟವರು. ಮೋಹನ ಭಟ್‌ (56), ಲಲಿತಾ ಭಟ್‌ (36) ಹಾಗೂ ಗೋಪಾಲಕೃಷ್ಣ ಭಟ್‌ (84) ಗಾಯಗೊಂಡಿದ್ದು, ಕೆಎಲ್ಇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಉಡುಪಿಯಿಂದ ಬೆಳಗಾವಿಗೆ ವಲಸೆ ಬಂದು ನೆಲೆಸಿದ್ದ ಮೋಹನ ಭಟ್‌ ಎಂಬುವವರ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸೋರಿಕೆಯಾಗಿತ್ತು. ಅದನ್ನು ಗಮನಿಸದೇ ವ್ಯಕ್ತಿಯೊಬ್ಬರು ಒಲೆ ಹೊತ್ತಿಸಲು ಮುಂದಾದಾಗ ಇಡೀ ಮನೆಗೆ ಬೆಂಕಿ ವ್ಯಾಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT