ಜಲಾಶಯ ನಿರ್ಮಿಸುವ ಮೊದಲೇ ಜಲಾವೃತವಾಗುವ ಪ್ರದೇಶಗಳನ್ನು ಗುರುತಿಸಿ, ಭೂ ಸ್ವಾಧೀನ ಮಾಡಿಕೊಳ್ಳಲಾಗಿರುತ್ತದೆ. ಪರಿಹಾರ, ಪುನರ್ವಸತಿ ನೀಡಿದ್ದರೂ ಕೆಲವರು ಮತ್ತೆ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇದಲ್ಲದೇ, ತಮ್ಮ ಜಮೀನು ಜಲಾಶಯ ವ್ಯಾಪ್ತಿಗೆ ಒಳಪಡದಿದ್ದರೂ ಕೆಲವರು ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಇವೆಲ್ಲ ಪ್ರಕರಣಗಳಿಗೆ ತಡೆಯೊಡ್ಡಬಹುದಾಗಿದೆ.