ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ‘ಮಹಾನವಮಿ ಅಮಾವಾಸ್ಯೆ ದಿನ ಬಡಾಲ ಅಂಕಲಗಿಯಲ್ಲಿ ಬಡವರ ಮನೆ ಬಿದ್ದು ಏಳು ಮಂದಿ ಸಾವಿಗೀಡಾಗಿರುವುದು ನೋವಿನ ಸಂಗತಿ. ಆ ನೋವು ತುಂಬಿಕೊಡಲು ಯಾರಿಂದಲೂ ಸಾಧ್ಯವಿಲ್ಲ. ನಾವು ಪರಿಹಾರ ಕೊಡಬಹುದಷ್ಟೆ. ತಲಾ ₹ 5 ಲಕ್ಷದಂತೆ ಸರ್ಕಾರಿಂದ ಚೆಕ್ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರೂ ವಿಷಯ ತಿಳಿದ ಕೂಡಲೇ ತಲಾ ₹ 2 ಲಕ್ಷದಂತೆ ಪರಿಹಾರ ಕೊಡಲು ಮಂಜೂರಾತಿ ನೀಡಿದ್ದಾರೆ. ಆ ಬಡ ಕುಟುಂಬದ ಹಾಗೂ ಸರ್ಕಾರದ ಪರವಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.