ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ‘ಉತ್ತರ ಕರ್ನಾಟಕದ ಜನತೆಗೆ ಕಲೆ, ಕಲಾವಿದರೆಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ. ಪುನೀತ್ ಅವರ ಅಗಲಿಕೆಯನ್ನು ನಾವು ಇನ್ನೂ ಮರೆಯಲು ಆಗುತ್ತಿಲ್ಲ. ಕಲಾವಿದರಿಗೆ ಅವರ ಆದರ್ಶಗಳು ಬೆಳಕಾಗಲಿ’ ಎಂದರು.