ಸಂಘಟನೆಯ ಪ್ರಮುಖ ಎಲ್.ಎಸ್. ನಾಯಕ ಮಾತನಾಡಿ, ‘ಬೆಳೆ ನಾಶವಾದ ನಂತರ ಸಮೀಕ್ಷೆ ನಡೆಸಿ ಜಮೀನಿನಲ್ಲಿ ಬೆಳೆಗಳೇ ಇಲ್ಲವೆಂದು ವರದಿ ನೀಡಿದ್ದಾರೆ. ಜೊತೆಗೆ ರೈತರೊಂದಿಗೆ ಸಮೀಕ್ಷೆದಾರರ ನಡುವಳಿಕೆ ಸೌಜನ್ಯಯುತವಾಗಿಲ್ಲ. ಸರ್ಕಾರವೇ ಬರಪೀಡಿತವೆಂದು ಘೋಷಿಸಿದೆ. ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಬರ ಪರಿಹಾರ ಹಂಚಿಕೆಯಾಗುತ್ತಿದೆ. ಇದೀಗ ಸಮೀಕ್ಷೆ ಹೆಸರಿನಲ್ಲಿ ಬಹು ಸಂಖ್ಯೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ.
ಹಣ ಜಮೆಯ ಕುರಿತು ಕೃಷಿ ಇಲಾಖೆ ಕಚೇರಿಯಲ್ಲಿ ವಿಚಾರಿಸಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ತುರ್ತಾಗಿ ಮಾಹಿತಿ ನೀಡಲು ಕ್ರಮ ಜರುಗಿಸಬೇಕು. ಜೊತೆಗೆ ಭೂಮಿ ಸರ್ವೇಕ್ಷಣೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ತಾಲ್ಲೂಕಿನ ಎಲ್ಲ ರೈತರ ಖಾತೆಗೆ ಪರಿಹಾರ ಶೀಘ್ರವಾಗಿ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.