‘ರಫ್ತಿಗೆ ಸಂಬಂಧಿಸಿದಂತೆ ಉದ್ಯಮಿಗಳು ಆನ್ಲೈನ್ನಲ್ಲಿಯೇ ತಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ. ಕಚೇರಿಗೆ ಅಲೆಯುವುದಕ್ಕಿಂತ ಆನ್ಲೈನ್ನಲ್ಲಿ ಮಾಡುವುದು ಅವರಿಗೆ ಸುಲಭ. ಹೀಗಾಗಿ ಈ ಕೇಂದ್ರದಿಂದ ಉದ್ಯಮಿಗಳು ಹೆಚ್ಚಿನ ನೆರವು ಪಡೆಯಲಿಲ್ಲ. ಅದಕ್ಕಾಗಿ ಬಂದ್ ಮಾಡಲಾಗಿದೆ’ ಎಂದು ವಾಣಿಜ್ಯೋದ್ಯಮ ಸಂಘದ ಬೆಳಗಾವಿ ಘಟಕದ ಅಧ್ಯಕ್ಷ ಶ್ರೀಧರ ಉಪ್ಪಿನ ತಿಳಿಸಿದರು.