ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ‘ಜಿಲ್ಲೆಗೆ ಈ ವರ್ಷ 63ಸಾವಿರ ಟನ್ ರಸಗೊಬ್ಬರ ಬಂದಿದೆ. ಕಳೆದ ವರ್ಷದ ದಾಸ್ತಾನು 20ಸಾವಿರ ಟನ್ ಇತ್ತು. ಒಟ್ಟು 86ಸಾವಿರ ಟನ್ಗಳಲ್ಲಿ ಈಗಾಗಲೇ 76ಸಾವಿರ ಟನ್ ವಿತರಿಸಲಾಗಿದೆ. 10 ದಿನಗಳಲ್ಲಿ ಮತ್ತೆ 10ಸಾವಿರ ಟನ್ ಬರಲಿದೆ. ಗೋಕಾಕ, ಅಥಣಿ ಸೇರಿದಂತೆ ಕೊರತೆ ಇರುವ ತಾಲ್ಲೂಕುಗಳಿಗೆ ಹೊಸ ದಾಸ್ತಾನು ಬಂದ ಬಳಿಕ ಕಳುಹಿಸಲಾಗುತ್ತಿದೆ’ ಎಂದು ತಿಳಿಸಿದರು.