ರಾಮದುರ್ಗ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಬೀಳದ ಹಿನ್ನಲೆಯಲ್ಲಿ ತಾಲ್ಲೂಕಿನ ಬನ್ನೂರು ಗ್ರಾಮದ ಹಿರಿಯರು ಕತ್ತೆಗಳಿಗೆ ಮದುವೆ ಮಾಡಿ ವರುಣನ ಕೃಪೆಗೆ ಪ್ರಾರ್ಥನೆ ಮಾಡಿದರು.
ಕತ್ತೆಗಳು ಗ್ರಾಮ ಪ್ರವೇಶಿಸುತ್ತಿದ್ದಂತೆ ಅವುಗಳಿಗೆ ಅರಿಸಿನದ ನೀರು ಪ್ರೋಕ್ಷಣೆ, ಬಾಸಿಂಗ ಧಾರಣೆ, ಮಹಿಳೆಯರಿಗೆ ಕಂಕಣ ಕಟ್ಟಿ ಮಾಂಗಲ್ಯ ಮುಡಿಗೇರಿಸಿ ಗ್ರಾಮ ದೇವಿ ದುರ್ಗಾದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಮದುವೆ ಮಾಡಿದರು.
ನಂತರ ಜೋಡಿ ಕತ್ತೆಗಳನ್ನು ಹಲಗೆ, ಕರಡಿ ಮಜಲುಗಳ ಸಮೇತ, ಆರತಿ ಮಾಡಿ ಗ್ರಾಮದ ತುಂಬ ಮೆರವಣಿಗೆ ಮಾಡಿದರು. ಮದುವೆಗೆ ಬಂದಿದ್ದ ಗ್ರಾಮಸ್ಥರಿಗೆ ಸಹಿ ಹಂಚಿ ಸಂಭ್ರಮಿಸಿದರು.